ಬಸ್ಸಿನಲ್ಲಿ ಬಂದಿದ್ದ ಆರೋಪಿ
‘ಬ್ರೂಕ್ಫೀಲ್ಡ್ಗೆ ಬಸ್ಸಿನಲ್ಲಿ ಬಂದಿದ್ದ ಆರೋಪಿ, ಬ್ಯಾಗ್ ಹಿಡಿದುಕೊಂಡು ನೇರವಾಗಿ ರಾಮೇಶ್ವರಂ ಕೆಫೆಗೆ ಹೋಗಿದ್ದ. ಇಡ್ಲಿ ಪಡೆದಿದ್ದ. ಕೈ ಹಾಗೂ ತಟ್ಟೆಗಳನ್ನು ತೊಳೆಯಲು ಪ್ರತ್ಯೇಕ ಜಾಗವಿದೆ. ಇದರ ಪಕ್ಕವೇ ಕಟ್ಟೆ ಇದ್ದು, ಅದೇ ಜಾಗದಲ್ಲಿ ಶಂಕಿತ ಕುಳಿತುಕೊಂಡಿದ್ದ. ಕಟ್ಟೆಗೆ ಪಕ್ಕ ಮರವಿದ್ದು, ಅಲ್ಲೇ ಬ್ಯಾಗ್ ಇರಿಸಿದ್ದ. ನಂತರ, ಇಡ್ಲಿ ತಿಂದು ಸ್ಥಳದಿಂದ ಹೊರಟು ಹೋಗಿದ್ದಾನೆ. ಈ ದೃಶ್ಯ ವಿಡಿಯೊದಲ್ಲಿದೆ’ ಎಂದು ಹೇಳಿದರು.