‘ಬೇಗನೇ ಮದುವೆಯಾಗೋಣವೆಂದು ಮಹಿಳೆ ಒತ್ತಾಯಿಸುತ್ತಿದ್ದರು. ಅದಕ್ಕೆ ನಿರಾಕರಿಸಿದ್ದ ಆರೋಪಿ, ‘ನೀನು ಸರಿ ಇಲ್ಲ. ಪತಿಯನ್ನು ಬಿಟ್ಟು ಬಂದಿದ್ದು, ನಿನ್ನ ನಡತೆಯೂ ಚೆನ್ನಾಗಿಲ್ಲ. ಮದುವೆಯಾಗುವಂತೆ ಬಹಳ ಒತ್ತಾಯಿಸಿದರೆ, ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ’ ಎಂದು ಬೆದರಿಕೆ ಹಾಕಿದ್ದರು. ನೊಂದ ಮಹಿಳೆ, ಮಹದೇವಪುರ ಠಾಣೆಗೆ ಜೂನ್ 8ರಂದು ದೂರು ನೀಡಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.