ಹೈನುಗಾರಿಕೆಗೆ ಮೊರೆ: ‘ಎರಡು ಎಕರೆಯಲ್ಲಿ ಟೊಮೆಟೊ ಬೆಳೆದು ಎರಡು ವರ್ಷಗಳಲ್ಲಿ ₹ 10 ಲಕ್ಷ ನಷ್ಟವಾಯಿತು. ಹೀಗಾಗಿ, ಟೊಮೆಟೊ ಬಿಟ್ಟು ಹೈನುಗಾರಿಕೆಯಲ್ಲಿ ತೊಡಗಿದ್ದೇನೆ. ಜಿಲ್ಲೆಯಲ್ಲಿ ಟೊಮೆಟೊಗೆ ರೋಗ ಹೆಚ್ಚುತ್ತಿದೆ, ಅಕಾಲಿಕ ಮಳೆ, ಬಿಸಿಲು ಹೆಚ್ಚಿದ್ದು, ಸರಿಯಾಗಿ ಬೆಲೆ ಸಿಗುತ್ತಿಲ್ಲ’ ಎಂದು ತಾಲ್ಲೂಕಿನ ತೊಟ್ಲಿ ಗ್ರಾಮದ ರೈತ ಮುರಳಿ ತಿಳಿಸಿದರು.