<p><strong>ಬೆಂಗಳೂರು:</strong>ಬಿಎಚ್ಇಎಲ್ (ರೆಮ್ಕೊ) ಎಂಪ್ಲಾಯಿಸ್ ಹೌಸ್ ಬಿಲ್ಡಿಂಗ್ ಕೊ– ಆಪರೇಟಿವ್ ಸೊಸೈಟಿಯುರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆಯ (ರೇರಾ) ನಿಯಮಗಳನ್ನು ಉಲ್ಲಂಘಿಸಿ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬಡಾವಣೆ ಅಭಿವೃದ್ಧಿಪಡಿಸಿದೆ. ಅಲ್ಲದೆ, ನಿಯಮಬಾಹಿರವಾಗಿ ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತಿದೆ ಎಂದು ಸೊಸೈಟಿ ಸದಸ್ಯರೇ ಆರೋಪಿಸಿದ್ದಾರೆ.</p>.<p>ಆದರೆ, ಸೊಸೈಟಿ ಚುನಾವಣೆ ಸಂದರ್ಭದಲ್ಲಿ ಪದೇ ಪದೇ ಈ ರೀತಿ ಸುಳ್ಳು ಆರೋಪ ಮಾಡಲಾಗುತ್ತದೆ ಎಂದು ಸಂಘದ ಅಧ್ಯಕ್ಷ ವಿಜಯ್ಕುಮಾರ್ ಪ್ರತಿಕ್ರಿಯಿಸಿದ್ದಾರೆ.</p>.<p><strong>ನಿಯಮ ಉಲ್ಲಂಘನೆ:</strong>‘ಯಾವುದೇ ಹೌಸಿಂಗ್ ಸೊಸೈಟಿಯು ಬಡಾವಣೆ ಅಭಿವೃದ್ಧಿ ಪಡಿಸುವಾಗ ರೇರಾದಲ್ಲಿ ನೋಂದಣಿ ಮಾಡಿಸಬೇಕು. ಎಲ್ಲದಕ್ಕೂ ಪರವಾನಗಿ ಪಡೆಯಬೇಕು. ಆದರೆ, ಬಿಎಚ್ಇಎಲ್ ರೆಮ್ಕೊ ಹೌಸಿಂಗ್ ಸೊಸೈಟಿಯು ಈ ಯಾವ ಪರವಾನಗಿ<br />ಯನ್ನೂ ಪಡೆಯದೆ, ಬಡಾವಣೆ ಅಭಿವೃದ್ಧಿಪಡಿಸಿ, ನಿವೇಶನಗಳನ್ನು ಹಂಚಿಕೆ ಮಾಡುತ್ತಿದೆ’ ಎಂದು ಸೊಸೈಟಿ ಸದಸ್ಯ ಅಶೋಕ್ ಕುಳ್ಳಿ ಆರೋಪಿಸಿದ್ದಾರೆ.</p>.<p>‘ಸಂಘದ ಸದಸ್ಯರಲ್ಲದವರಿಗೂ ನಿವೇಶನಗಳನ್ನು ಮಾರಾಟ ಮಾಡಲಾಗಿದೆ. ಸೊಸೈಟಿಯ ಚಟುವಟಿಕೆಯಲ್ಲಿ ವ್ಯಾಪಕ ಅಕ್ರಮ ನಡೆದಿದೆ’ ಎಂದು ಆರೋಪಿಸಿ ಬಿಎಚ್ಇಎಲ್ ನೌಕರರೂ ಆಗಿರುವ ಅಶೋಕ್ ದೂರಿದರು.</p>.<p>‘ಬೆಂಗಳೂರು ದಕ್ಷಿಣ ತಾಲ್ಲೂಕಿನ ಪಟ್ಟಣಗೆರೆಯಲ್ಲಿಯೂ ಇದೇ ಸೊಸೈಟಿ ಲೇಔಟ್ ಮಾಡಿದೆ. ಆದರೆ, ನನಗೆ ನಿವೇಶನ ನೀಡಿಲ್ಲ. ನಿವೇಶನ ನೀಡುವಂತೆ ಹೈಕೋರ್ಟ್ ಹೇಳಿದ್ದರೂ ಈವರೆಗೆ ನೀಡಿಲ್ಲ’ ಎಂದೂ ಅವರು ದೂರಿದರು.</p>.<p><strong>ಚುನಾವಣೆ ವೇಳೆ ಸಾಮಾನ್ಯ:‘</strong>ಎಲೆಕ್ಟ್ರಾನಿಕ್ ಸಿಟಿಯಲ್ಲಿ ಅಭಿವೃದ್ಧಿಪಡಿಸಿರುವ ಲೇಔಟ್ ನಿರ್ಮಾಣ ಕಾರ್ಯ ಆರಂಭವಾಗಿದ್ದು 2004ರಲ್ಲಿ. 2006ರಲ್ಲಿ ಯೋಜನೆ ಮುಗಿದ ನಂತರ ಬಿಎಂಆರ್ಡಿಎದಿಂದ ಎಲ್ಲ ಅನುಮೋದನೆ ಪಡೆಯಲಾಗಿದೆ. ಇದರಲ್ಲಿ ಶೇ 40ರಷ್ಟು ನಿವೇಶನಗಳನ್ನು ಸೊಸೈಟಿ ಸದಸ್ಯರಿಗೆ ಮಂಜೂರು ಮಾಡಲಾಗಿದೆ’ ಎಂದು ವಿಜಯ್ಕುಮಾರ್ ಹೇಳಿದರು.</p>.<p>‘2016ರ ನಂತರ ರೇರಾ ಕಾಯ್ದೆ ಜಾರಿಯಾಗಿದೆ. ಈ ಕಾಯ್ದೆಯಲ್ಲಿ ಕೆಲವು ವಿನಾಯ್ತಿಗಳನ್ನು ಘೋಷಿಸಲಾಗಿದೆ.ಸ್ಥಳೀಯ ಯೋಜನಾ ಪ್ರಾಧಿಕಾರ ರೂಪಿಸಿರುವ ನಿಯಮದ ಅನುಸಾರ ಸಿಎ ನಿವೇಶನಗಳು, ಉದ್ಯಾನ, ರಸ್ತೆಗಳನ್ನು ಒಳಗೊಂಡಂತೆ ಯಾವುದೇ ಬಡಾವಣೆಯನ್ನು ನಿರ್ಮಿಸಿದ್ದರೆ, ಅದು ರೇರಾ ಕಾಯ್ದೆಯಡಿ ಬರುವುದಿಲ್ಲ. ಈ ವಿನಾಯ್ತಿಯನ್ನೇ ನಾವು ಪ್ರಾಧಿಕಾರದಿಂದ ಕೇಳುತ್ತಿದ್ದೇವೆ. ಬುಧವಾರ ಈ ಕುರಿತು ರೇರಾ ವಿಚಾರಣೆ ನಡೆಸಲಿದ್ದು, ನಮ್ಮ ವಕೀಲರು ವಾದ ಮಂಡಿಸಲಿದ್ದಾರೆ’ ಎಂದು ತಿಳಿಸಿದರು.</p>.<p>‘ಭಾನುವಾರ (ಫೆ.23) ಸೊಸೈಟಿಯ ನಿರ್ದೇಶಕ ಮಂಡಳಿಗೆ ಚುನಾವಣೆ ನಡೆಯಲಿದೆ. ನಮ್ಮ ಘನತೆಗೆ ಚ್ಯುತಿ ತರುವ ಉದ್ದೇಶದಿಂದ ಚುನಾವಣೆ ವೇಳೆ ಈ ರೀತಿ ಆರೋಪ ಮಾಡಲಾಗುತ್ತಿದೆ’ ಎಂದೂ ಅವರು ದೂರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong>ಬಿಎಚ್ಇಎಲ್ (ರೆಮ್ಕೊ) ಎಂಪ್ಲಾಯಿಸ್ ಹೌಸ್ ಬಿಲ್ಡಿಂಗ್ ಕೊ– ಆಪರೇಟಿವ್ ಸೊಸೈಟಿಯುರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆಯ (ರೇರಾ) ನಿಯಮಗಳನ್ನು ಉಲ್ಲಂಘಿಸಿ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬಡಾವಣೆ ಅಭಿವೃದ್ಧಿಪಡಿಸಿದೆ. ಅಲ್ಲದೆ, ನಿಯಮಬಾಹಿರವಾಗಿ ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತಿದೆ ಎಂದು ಸೊಸೈಟಿ ಸದಸ್ಯರೇ ಆರೋಪಿಸಿದ್ದಾರೆ.</p>.<p>ಆದರೆ, ಸೊಸೈಟಿ ಚುನಾವಣೆ ಸಂದರ್ಭದಲ್ಲಿ ಪದೇ ಪದೇ ಈ ರೀತಿ ಸುಳ್ಳು ಆರೋಪ ಮಾಡಲಾಗುತ್ತದೆ ಎಂದು ಸಂಘದ ಅಧ್ಯಕ್ಷ ವಿಜಯ್ಕುಮಾರ್ ಪ್ರತಿಕ್ರಿಯಿಸಿದ್ದಾರೆ.</p>.<p><strong>ನಿಯಮ ಉಲ್ಲಂಘನೆ:</strong>‘ಯಾವುದೇ ಹೌಸಿಂಗ್ ಸೊಸೈಟಿಯು ಬಡಾವಣೆ ಅಭಿವೃದ್ಧಿ ಪಡಿಸುವಾಗ ರೇರಾದಲ್ಲಿ ನೋಂದಣಿ ಮಾಡಿಸಬೇಕು. ಎಲ್ಲದಕ್ಕೂ ಪರವಾನಗಿ ಪಡೆಯಬೇಕು. ಆದರೆ, ಬಿಎಚ್ಇಎಲ್ ರೆಮ್ಕೊ ಹೌಸಿಂಗ್ ಸೊಸೈಟಿಯು ಈ ಯಾವ ಪರವಾನಗಿ<br />ಯನ್ನೂ ಪಡೆಯದೆ, ಬಡಾವಣೆ ಅಭಿವೃದ್ಧಿಪಡಿಸಿ, ನಿವೇಶನಗಳನ್ನು ಹಂಚಿಕೆ ಮಾಡುತ್ತಿದೆ’ ಎಂದು ಸೊಸೈಟಿ ಸದಸ್ಯ ಅಶೋಕ್ ಕುಳ್ಳಿ ಆರೋಪಿಸಿದ್ದಾರೆ.</p>.<p>‘ಸಂಘದ ಸದಸ್ಯರಲ್ಲದವರಿಗೂ ನಿವೇಶನಗಳನ್ನು ಮಾರಾಟ ಮಾಡಲಾಗಿದೆ. ಸೊಸೈಟಿಯ ಚಟುವಟಿಕೆಯಲ್ಲಿ ವ್ಯಾಪಕ ಅಕ್ರಮ ನಡೆದಿದೆ’ ಎಂದು ಆರೋಪಿಸಿ ಬಿಎಚ್ಇಎಲ್ ನೌಕರರೂ ಆಗಿರುವ ಅಶೋಕ್ ದೂರಿದರು.</p>.<p>‘ಬೆಂಗಳೂರು ದಕ್ಷಿಣ ತಾಲ್ಲೂಕಿನ ಪಟ್ಟಣಗೆರೆಯಲ್ಲಿಯೂ ಇದೇ ಸೊಸೈಟಿ ಲೇಔಟ್ ಮಾಡಿದೆ. ಆದರೆ, ನನಗೆ ನಿವೇಶನ ನೀಡಿಲ್ಲ. ನಿವೇಶನ ನೀಡುವಂತೆ ಹೈಕೋರ್ಟ್ ಹೇಳಿದ್ದರೂ ಈವರೆಗೆ ನೀಡಿಲ್ಲ’ ಎಂದೂ ಅವರು ದೂರಿದರು.</p>.<p><strong>ಚುನಾವಣೆ ವೇಳೆ ಸಾಮಾನ್ಯ:‘</strong>ಎಲೆಕ್ಟ್ರಾನಿಕ್ ಸಿಟಿಯಲ್ಲಿ ಅಭಿವೃದ್ಧಿಪಡಿಸಿರುವ ಲೇಔಟ್ ನಿರ್ಮಾಣ ಕಾರ್ಯ ಆರಂಭವಾಗಿದ್ದು 2004ರಲ್ಲಿ. 2006ರಲ್ಲಿ ಯೋಜನೆ ಮುಗಿದ ನಂತರ ಬಿಎಂಆರ್ಡಿಎದಿಂದ ಎಲ್ಲ ಅನುಮೋದನೆ ಪಡೆಯಲಾಗಿದೆ. ಇದರಲ್ಲಿ ಶೇ 40ರಷ್ಟು ನಿವೇಶನಗಳನ್ನು ಸೊಸೈಟಿ ಸದಸ್ಯರಿಗೆ ಮಂಜೂರು ಮಾಡಲಾಗಿದೆ’ ಎಂದು ವಿಜಯ್ಕುಮಾರ್ ಹೇಳಿದರು.</p>.<p>‘2016ರ ನಂತರ ರೇರಾ ಕಾಯ್ದೆ ಜಾರಿಯಾಗಿದೆ. ಈ ಕಾಯ್ದೆಯಲ್ಲಿ ಕೆಲವು ವಿನಾಯ್ತಿಗಳನ್ನು ಘೋಷಿಸಲಾಗಿದೆ.ಸ್ಥಳೀಯ ಯೋಜನಾ ಪ್ರಾಧಿಕಾರ ರೂಪಿಸಿರುವ ನಿಯಮದ ಅನುಸಾರ ಸಿಎ ನಿವೇಶನಗಳು, ಉದ್ಯಾನ, ರಸ್ತೆಗಳನ್ನು ಒಳಗೊಂಡಂತೆ ಯಾವುದೇ ಬಡಾವಣೆಯನ್ನು ನಿರ್ಮಿಸಿದ್ದರೆ, ಅದು ರೇರಾ ಕಾಯ್ದೆಯಡಿ ಬರುವುದಿಲ್ಲ. ಈ ವಿನಾಯ್ತಿಯನ್ನೇ ನಾವು ಪ್ರಾಧಿಕಾರದಿಂದ ಕೇಳುತ್ತಿದ್ದೇವೆ. ಬುಧವಾರ ಈ ಕುರಿತು ರೇರಾ ವಿಚಾರಣೆ ನಡೆಸಲಿದ್ದು, ನಮ್ಮ ವಕೀಲರು ವಾದ ಮಂಡಿಸಲಿದ್ದಾರೆ’ ಎಂದು ತಿಳಿಸಿದರು.</p>.<p>‘ಭಾನುವಾರ (ಫೆ.23) ಸೊಸೈಟಿಯ ನಿರ್ದೇಶಕ ಮಂಡಳಿಗೆ ಚುನಾವಣೆ ನಡೆಯಲಿದೆ. ನಮ್ಮ ಘನತೆಗೆ ಚ್ಯುತಿ ತರುವ ಉದ್ದೇಶದಿಂದ ಚುನಾವಣೆ ವೇಳೆ ಈ ರೀತಿ ಆರೋಪ ಮಾಡಲಾಗುತ್ತಿದೆ’ ಎಂದೂ ಅವರು ದೂರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>