‘ರಾಮಯ್ಯ ಅವರು ದೇಶದಲ್ಲೇ ಕರ್ನಾಟಕವನ್ನು ಪ್ರತಿಬಿಂಬಿಸುವಂತಹ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ನಮ್ಮೆಲ್ಲರ ಹೆಮ್ಮೆಯನ್ನು ಹೆಚ್ಚಿಸಿದ್ದಾರೆ.ನವಕರ್ನಾಟಕ ನಿರ್ಮಾತೃಗಳ ಸಾಲಿನಲ್ಲಿ ಬರುವ ರಾಮಯ್ಯ ಅವರನ್ನು ಸದಾ ನೆನೆಯಬೇಕು. ಯಾವುದೇ ಕೆಲಸದ ಕುರಿತು ಅವರಿಗಿದ್ದ ಶ್ರದ್ಧೆಯನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು. ಇಂತಹ ವ್ಯಕ್ತಿಯ ಹೆಸರಿನಲ್ಲಿ ಅಂಚೆ ಲಕೋಟೆ ಹೊರತರುತ್ತಿರುವುದು ನಮ್ಮ ಹೆಮ್ಮೆ’ ಎಂದರು.