ಬೆಂಗಳೂರು: ‘102 ಹಿಂದುಳಿದ ಜಾತಿಗಳ ಪೈಕಿ ಪ್ರವರ್ಗ 2ಎ ಮೀಸಲಾತಿ ಸೌಲಭ್ಯವನ್ನು ಒಂದೆರಡು ಬಲಿಷ್ಠ ಹಾಗೂ ದೊಡ್ಡ ಸಮುದಾಯದ ಜಾತಿಗಳು ಕಬಳಿಸುತ್ತಿವೆ. ಉಳಿದ ಕುಂಬಾರ, ಗಾಣಿಗ, ಸವಿತ, ತಿಗಳ, ದೇವಾಂಗ ಸೇರಿದಂತೆ 99 ಸಣ್ಣ ಜಾತಿಗಳಿಗೆ ಅನ್ಯಾಯವಾಗುತ್ತಿದೆ’ ಎಂದು ಕರ್ನಾಟಕ ಪ್ರದೇಶ ಹಿಂದುಳಿದ ವರ್ಗಗಳ ಜಂಟಿ ಕ್ರಿಯಾ ವೇದಿಕೆಯ ಅಧ್ಯಕ್ಷ ಕೃಷ್ಣ ನಾಯಕ್ ದೂರಿದರು.