‘ಎಂಟು ವರ್ಷದಿಂದ ಬಡಾವಣೆ 2,252 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿದೆ. 26,500ಕ್ಕೂ ಹೆಚ್ಚು ನಿವೇಶನಗಳನ್ನು ಹಂಚಿಕೆ ಮಾಡುವ ಗುರಿ ಹೊಂದಿದ್ದು, ಎಂಟು ವರ್ಷದಿಂದ ಇದು ಪೂರ್ಣಗೊಂಡಿಲ್ಲ. ಈಗಾಗಲೇ ನಿವೇಶನ ಪಡೆದಿರುವವರಿಗೆ ಇಂತಹ ಅಕ್ರಮ ಪರಿವರ್ತನೆಯಿಂದ ಹಸಿರು ಹಾಗೂ ಆಟದ ಮೈದಾನ ಲಭ್ಯವಾಗುವುದಿಲ್ಲ’ ಎಂದು ನಾಡಪ್ರಭು ಕೆಂಪೇಗೌಡ ಬಡಾವಣೆ ವೇದಿಕೆಯ ಸೂರ್ಯ ಕಿರಣ್ ಹೇಳಿದರು.