<p><strong>ಯಲಹಂಕ</strong><strong>: </strong><strong>ರೇವಾ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ 9ನೇ ಘಟಿಕೋತ್ಸವ ಸಮಾರಂಭದಲ್ಲಿ ವಿವಿಧ ವಿಷಯಗಳಲ್ಲಿ ಪದವಿಗಳನ್ನು ಪೂರ್ಣಗೊಳಿಸಿದ 4537 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು</strong><strong>.</strong></p>.<p><strong>3311 ವಿದ್ಯಾರ್ಥಿಗಳಿಗೆ ಪದವಿ</strong><strong>, </strong><strong>1156 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ</strong><strong>, </strong><strong>70 ಮಂದಿಗೆ ಪಿ</strong><strong>ಎಚ್.</strong><strong>ಡಿ. ಪದವಿ ಪ್ರದಾನ ಮಾಡಲಾಯಿತು. ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಅತ್ಯುತ್ತಮ ಸಾಧನೆಗೈದ 66 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು</strong><strong>.</strong></p>.<p><strong>ವಿಶ್ವವಿದ್ಯಾಲಯ ಅನುದಾನ ಆಯೋಗದ </strong><strong>(</strong><strong>ಯುಜಿಸಿ</strong><strong>)</strong><strong>ಅಧ್ಯಕ್ಷ ಮಾಮಿದಾಳ ಜಗದೇಶ್ ಕುಮಾರ್ ಮಾತನಾಡಿ</strong><strong>, ‘</strong><strong>ಭಾರತೀಯ ಪ್ರಜೆಗಳಾಗಿ ನಮ್ಮ ಸಂವಿಧಾನ</strong><strong>, </strong><strong>ಇಲ್ಲಿನ ಸಂಸದೀಯ ವ್ಯವಸ್ಥೆ</strong><strong>, </strong><strong>ಪ್ರಜಾಪ್ರಭುತ್ವದ ಚುನಾವಣಾ ಪ್ರಕ್ರಿಯೆಗಳು</strong><strong>, </strong><strong>ನ್ಯಾಯಾಂಗ ಹಾಗೂ ಮಾಧ್ಯಮದಂತಹ ದೃಢವಾದ ಸಂಸ್ಥೆಗಳ ಬಗ್ಗೆ ಹೆಮ್ಮೆ ಪಡಬೇಕು.</strong><strong> </strong><strong>ಇವೆಲ್ಲವೂ ನಮ್ಮ ಸಂವಿಧಾನದ ಮೌಲ್ಯಗಳಲ್ಲಿಯೇ ಅಡಕವಾಗಿವೆ’ ಎಂದು ತಿಳಿಸಿದರು</strong><strong>.</strong></p>.<p><strong>ರಾಷ್ಟ್ರೀಯ ಶಿಕ್ಷಣನೀತಿಯ ಚೌಕಟ್ಟು</strong><strong>, </strong><strong>ಸಾಂವಿಧಾನಿಕ ಮೌಲ್ಯದಲ್ಲಿದೆ. </strong><strong>ಪ್ರಗತಿಪರ</strong><strong>, </strong><strong>ಒಳಗೊಳ್ಳುವ ಮತ್ತು ಸುಸ್ಥಿರ ಭವಿಷ್ಯದ ಭಾರತೀಯ ಶಿಕ್ಷಣವ್ಯವಸ್ಥೆಯ ಸುಧಾರಣೆ ಮಾಡುವುದು ಇದರ ಮುಖ್ಯಗುರಿ</strong><strong>. </strong><strong>ಸಂವಿಧಾನದ ಸಮಾನತೆ ಮತ್ತು ಒಳಗೊಳ್ಳುವಿಕೆಯ ಬದ್ಧತೆಗೆ ಶಿಕ್ಷಣ ನೀತಿ ಪೂರಕವಾಗಿದೆ. </strong><strong>ಅಶಕ್ತ ಗುಂಪಿನಿಂದ ಬಂದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಸಂಪರ್ಕ ಒದಗಿಸಲಿದೆ ಎಂದು ಹೇಳಿದರು. </strong></p>.<p><strong>ರೇವಾ ವಿಶ್ವವಿದ್ಯಾಲಯದ ಕುಲಾಧಿಪತಿ </strong><strong>ಪಿ</strong><strong>.</strong><strong>ಶ್ಯಾಮರಾಜು ಮಾತನಾಡಿ</strong><strong>, ‘</strong><strong>ವಿಶ್ವವಿದ್ಯಾಲಯದ ಸ್ಥಿರ ಮತ್ತು ವೇಗವಾದ ಪ್ರಗತಿಯ ಹಿಂದಿನ ಪ್ರೇರಕ ಶಕ್ತಿಯಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರಿದ್ದಾರೆ’ ಎಂದು ಕೃತಜ್ಞತೆ ಸಲ್ಲಿಸಿದರು. </strong></p>.<p><strong>ರೇವಾ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ </strong><strong>ಎನ್</strong><strong>.</strong><strong>ರಮೇಶ್</strong><strong>, </strong><strong>ಸಹ ಕುಲಪತಿ ಉಮೇಶ್ </strong><strong>ಎಸ್</strong><strong>.</strong><strong>ರಾಜು ಉಪಸ್ಥಿತರಿದ್ದರು</strong><strong>.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಲಹಂಕ</strong><strong>: </strong><strong>ರೇವಾ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ 9ನೇ ಘಟಿಕೋತ್ಸವ ಸಮಾರಂಭದಲ್ಲಿ ವಿವಿಧ ವಿಷಯಗಳಲ್ಲಿ ಪದವಿಗಳನ್ನು ಪೂರ್ಣಗೊಳಿಸಿದ 4537 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು</strong><strong>.</strong></p>.<p><strong>3311 ವಿದ್ಯಾರ್ಥಿಗಳಿಗೆ ಪದವಿ</strong><strong>, </strong><strong>1156 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ</strong><strong>, </strong><strong>70 ಮಂದಿಗೆ ಪಿ</strong><strong>ಎಚ್.</strong><strong>ಡಿ. ಪದವಿ ಪ್ರದಾನ ಮಾಡಲಾಯಿತು. ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಅತ್ಯುತ್ತಮ ಸಾಧನೆಗೈದ 66 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು</strong><strong>.</strong></p>.<p><strong>ವಿಶ್ವವಿದ್ಯಾಲಯ ಅನುದಾನ ಆಯೋಗದ </strong><strong>(</strong><strong>ಯುಜಿಸಿ</strong><strong>)</strong><strong>ಅಧ್ಯಕ್ಷ ಮಾಮಿದಾಳ ಜಗದೇಶ್ ಕುಮಾರ್ ಮಾತನಾಡಿ</strong><strong>, ‘</strong><strong>ಭಾರತೀಯ ಪ್ರಜೆಗಳಾಗಿ ನಮ್ಮ ಸಂವಿಧಾನ</strong><strong>, </strong><strong>ಇಲ್ಲಿನ ಸಂಸದೀಯ ವ್ಯವಸ್ಥೆ</strong><strong>, </strong><strong>ಪ್ರಜಾಪ್ರಭುತ್ವದ ಚುನಾವಣಾ ಪ್ರಕ್ರಿಯೆಗಳು</strong><strong>, </strong><strong>ನ್ಯಾಯಾಂಗ ಹಾಗೂ ಮಾಧ್ಯಮದಂತಹ ದೃಢವಾದ ಸಂಸ್ಥೆಗಳ ಬಗ್ಗೆ ಹೆಮ್ಮೆ ಪಡಬೇಕು.</strong><strong> </strong><strong>ಇವೆಲ್ಲವೂ ನಮ್ಮ ಸಂವಿಧಾನದ ಮೌಲ್ಯಗಳಲ್ಲಿಯೇ ಅಡಕವಾಗಿವೆ’ ಎಂದು ತಿಳಿಸಿದರು</strong><strong>.</strong></p>.<p><strong>ರಾಷ್ಟ್ರೀಯ ಶಿಕ್ಷಣನೀತಿಯ ಚೌಕಟ್ಟು</strong><strong>, </strong><strong>ಸಾಂವಿಧಾನಿಕ ಮೌಲ್ಯದಲ್ಲಿದೆ. </strong><strong>ಪ್ರಗತಿಪರ</strong><strong>, </strong><strong>ಒಳಗೊಳ್ಳುವ ಮತ್ತು ಸುಸ್ಥಿರ ಭವಿಷ್ಯದ ಭಾರತೀಯ ಶಿಕ್ಷಣವ್ಯವಸ್ಥೆಯ ಸುಧಾರಣೆ ಮಾಡುವುದು ಇದರ ಮುಖ್ಯಗುರಿ</strong><strong>. </strong><strong>ಸಂವಿಧಾನದ ಸಮಾನತೆ ಮತ್ತು ಒಳಗೊಳ್ಳುವಿಕೆಯ ಬದ್ಧತೆಗೆ ಶಿಕ್ಷಣ ನೀತಿ ಪೂರಕವಾಗಿದೆ. </strong><strong>ಅಶಕ್ತ ಗುಂಪಿನಿಂದ ಬಂದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಸಂಪರ್ಕ ಒದಗಿಸಲಿದೆ ಎಂದು ಹೇಳಿದರು. </strong></p>.<p><strong>ರೇವಾ ವಿಶ್ವವಿದ್ಯಾಲಯದ ಕುಲಾಧಿಪತಿ </strong><strong>ಪಿ</strong><strong>.</strong><strong>ಶ್ಯಾಮರಾಜು ಮಾತನಾಡಿ</strong><strong>, ‘</strong><strong>ವಿಶ್ವವಿದ್ಯಾಲಯದ ಸ್ಥಿರ ಮತ್ತು ವೇಗವಾದ ಪ್ರಗತಿಯ ಹಿಂದಿನ ಪ್ರೇರಕ ಶಕ್ತಿಯಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರಿದ್ದಾರೆ’ ಎಂದು ಕೃತಜ್ಞತೆ ಸಲ್ಲಿಸಿದರು. </strong></p>.<p><strong>ರೇವಾ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ </strong><strong>ಎನ್</strong><strong>.</strong><strong>ರಮೇಶ್</strong><strong>, </strong><strong>ಸಹ ಕುಲಪತಿ ಉಮೇಶ್ </strong><strong>ಎಸ್</strong><strong>.</strong><strong>ರಾಜು ಉಪಸ್ಥಿತರಿದ್ದರು</strong><strong>.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>