ಬೆಂಗಳೂರು ಕೇಂದ್ರೀಯ ವಿಭಾಗದ ಬಸ್ನಲ್ಲಿ ಜೂನ್ 14ರಂದು ಪ್ರಯಾಣಿಕರ ಸೋಗಿನಲ್ಲಿ ಆರೋಪಿ ಪ್ರಯಾಣಿಸುತ್ತಿದ್ದ. ಬಸ್ನಲ್ಲಿದ್ದ ತಿರುಮುರುಗನ್ ದಂಪತಿಯ ಬ್ಯಾಗ್ವೊಂದನ್ನು ಕದ್ದುಕೊಂಡು ಪರಾರಿಯಾಗುತ್ತಿದ್ದ. ಆತನನ್ನು ನೋಡಿದ್ದ ಚಾಲಕ–ನಿರ್ವಾಹಕ ಬೆನ್ನಟ್ಟಿ ಹಿಡಿದಿದ್ದರು. ನಂತರ, ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರ ಸುಪರ್ದಿಗೆ ಒಪ್ಪಿಸಿದ್ದರು.