‘ವಿವಿಧ ನದಿ ನೀರಿನ ವಿವಾದಗಳಲ್ಲಿ ನ್ಯಾಯಮಂಡಳಿಗಳು ರಾಜ್ಯಕ್ಕೆ 1,230 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿವೆ. ಆದರೆ, ರಾಜ್ಯಕ್ಕೆ 2050ರ ವೇಳೆಗೆ ಕುಡಿಯುವ ಉದ್ದೇಶ, ಕೈಗಾರಿಕೆ ಮತ್ತು ನೀರಾವರಿಗಾಗಿ 3 ಸಾವಿರ ಟಿಎಂಸಿ ಅಡಿಗಳಷ್ಟು ನೀರು ಬೇಕಾಗುತ್ತದೆ. ಅಂದರೆ 1,770 ಟಿಎಂಸಿ ಅಡಿ ನೀರು ಕೊರತೆ ಆಗುತ್ತದೆ. ರಾಜ್ಯ ಸರ್ಕಾರಜಲ ಸಂರಕ್ಷಣೆಗೆ ಹಲವು ಕ್ರಮಗಳನ್ನು ತೆಗೆದುಕೊಂಡಿದ್ದರೂ, ಹಲವು ಅಧ್ಯಯನ ವರದಿಗಳು ಅಂತರ್ ನದಿ ಪಾತ್ರಗಳ ನೀರಿನ ವರ್ಗಾವಣೆ ಸೂಕ್ತವೆಂದು ಹೇಳಿವೆ’ ಎಂದು ತಿಳಿಸಿದ್ದಾರೆ.