ಬೆಂಗಳೂರು: ಕರ್ತವ್ಯ ಮುಗಿಸಿ ಬೈಕ್ನಲ್ಲಿ ಮನೆಗೆ ಮರಳುತ್ತಿದ್ದ ನಂದಿನಿ ಲೇಔಟ್ ಠಾಣೆ ಹೆಡ್ ಕಾನ್ಸ್ಟೆಬಲ್ ಭಕ್ತರಾಮ್ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಗೊರೆಗುಂಟೆಪಾಳ್ಯ ಬಳಿ ಸೋಮವಾರ ರಾತ್ರಿ ನಡೆದಿದೆ.
ಎಂಇಎಸ್ ರಿಂಗ್ ರಸ್ತೆಯಲ್ಲಿ ಲಾರಿಯೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಾಗ ಕಿತ್ತು ಹೋದ ವಿಭಜಕದ ಬ್ಲಾಕ್ ಭಕ್ತರಾಮ್ ಚಲಾಯಿಸುತ್ತಿದ್ದ ಬೈಕ್ಗೆ ತಾಗಿದೆ.ಆಗ ರಸ್ತೆಗೆ ಬಿದ್ದ ಅವರಿಗೆ ಕಾರೊಂದು ಡಿಕ್ಕಿ ಹೊಡೆದಿದೆ.
ತೀವ್ರವಾಗಿ ಗಾಯಗೊಂಡ ಭಕ್ತರಾಮ್ ಅವರನ್ನು ತಕ್ಷಣ ಸಮೀಪದ ಪೀಪಲ್ಸ್ ಟ್ರೀ ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ.
ಭಕ್ತರಾಮ್ ಅವರಿಗೆ ಪತ್ನಿ, ಪ್ರಥಮ ವರ್ಷ ಪದವಿ ಕಲಿಯುತ್ತಿರುವ ಮಗಳು ಮತ್ತು ಐದನೇ ತರಗತಿಯಲ್ಲಿ ಕಲಿಯುತ್ತಿರುವ ಮಗ ಇದ್ದಾರೆ. ಕುಟುಂಬ ವಿದ್ಯಾರಣ್ಯಪುರದಲ್ಲಿ ನೆಲೆಸಿದೆ.