‘ಬಾಣಸವಾಡಿಯ ನಿವಾಸಿಯಾದ ಶ್ರೀಧರ್ ಮೊಬೈಲ್ ಮಳಿಗೆ ಇಟ್ಟುಕೊಂಡಿದ್ದಾರೆ. ಇತ್ತೀಚೆಗೆ ಹಳೇ ಟಿವಿ ಮತ್ತು ರೆಡಿಯೋದಲ್ಲಿರುವ ರೆಡ್ ಮರ್ಕ್ಯೂರಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ಹರಿದಾಡುತ್ತಿದ್ದವು. ಶ್ರೀಧರ್ ಅವರಿಗೆ ಕರೆ ಮಾಡಿದ್ದ ಸ್ನೇಹಿತನೊಬ್ಬ, ‘ಮನೋಜ್ ಬಳಿ ರೆಡ್ ಮರ್ಕ್ಯೂರಿ ಇದೆ. ಅದು ಕೋಟಿ ಬೆಲೆ ಬಾಳುತ್ತದೆ. ಅದನ್ನು ಪಡೆಯಲು ಮನೋಜ್ಗೆ ₹ 3 ಲಕ್ಷ ಕೊಡಬೇಕು’ ಎಂದಿದ್ದ. ಅದನ್ನು ನಂಬಿದ್ದ ಶ್ರೀಧರ್, ಹಣ ತೆಗೆದುಕೊಂಡು ಚನ್ನರಾಯಪಟ್ಟಣ ಬಳಿ ಹೋದಾಗ ಸುಲಿಗೆ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.