‘ಗಲಾಟೆ ಶಬ್ದ ಕೇಳಿ ಕೊಠಡಿಗೆ ಹೋಗಿದ್ದ ಹೋಟೆಲ್ ಮೇಲ್ವಿಚಾರಕ ಅರ್ಷದ್, ಯುವಕರ ವರ್ತನೆಯನ್ನು ಪ್ರಶ್ನಿಸಿದ್ದರು. ಕೊಠಡಿಯನ್ನು ಖಾಲಿ ಮಾಡಿಕೊಂಡು ಹೋಗುವಂತೆ ಹೇಳಿದ್ದರು. ಇಲ್ಲದಿದ್ದರೆ, ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗುವುದೆಂದು ಎಚ್ಚರಿಸಿದ್ದರು. ಅಷ್ಟಕ್ಕೆ ಕೋಪಗೊಂಡ ಆರೋಪಿಗಳು, ಅರ್ಷದ್ ಜೊತೆ ಜಗಳ ತೆಗೆದಿದ್ದರು. ಅವರ ಮುಖಕ್ಕೆ ಒಡೆದಿದ್ದರು. ಬೆನ್ನಿಗೆ ಚಾಕುವಿನಿಂದ ಇರಿದಿದ್ದರು’ ಎಂದು ಪೊಲೀಸರು ಹೇಳಿದರು.