‘ಡಿ.ಜಿ. ಹಳ್ಳಿಯ ಚರ್ಮದ ಮಂಡಿ ಬಳಿ ಶಿವರಾಜ್ ಸ್ಟ್ರೀಟ್ನ ಭಟ್ಟಿ ಅಮ್ಜದ್ ಅವರನ್ನು 11 ಮಂದಿಯ ತಂಡ ಲಾಂಗು, ಮಚ್ಚುಗಳಿಂದ ಕೊಚ್ಚಿ ಕೊಲೆ ಮಾಡಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ, ಈ ಕೃತ್ಯದ ಹಿಂದೆ ಯೂನಸ್ ನೇತೃತ್ವದ ಗುಂಪಿನ ಕೈವಾಡ ಪತ್ತೆಯಾಗಿತ್ತು. ಅಲ್ಲದೆ, ಕೊಲೆಗೆ ಸಂಚು ರೂಪಿಸಿ, ಹಲ್ಲೆ ನಡೆಸಿರುವುದು ಗೊತ್ತಾ ಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿತ್ತು’ ಎಂದು ಪೂರ್ವ ವಿಭಾಗದ ಡಿಸಿಪಿ ಎಸ್.ಡಿ. ಶರಣಪ್ಪ ತಿಳಿಸಿದರು.