ಎರಡು ತಿಂಗಳ ಹಿಂದೆಯಷ್ಟೇ ಜೈಲಿನಿಂದ ನರಸಿಂಹ, ನಗರದ ಹೊರವಲಯದ ತಾವರೆಕೆರೆ ಬಳಿ 2014ರ ಜುಲೈ13ರಂದು ನಡೆದಿದ್ದ ರಾಜಗೋಪಾಲ ನಗರ ಠಾಣೆ ರೌಡಿಶೀಟರ್ ಚೇತನ್ ಕುಮಾರ ಅಲಿಯಾಸ್ ಚೇತು (30) ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ. ಹಳೇ ವೈಷಮ್ಯದ ಹಿನ್ನೆಲೆಯಲ್ಲಿ 2009ರಲ್ಲಿ ಭದ್ರ ಎಂಬಾತನನ್ನು ಚೇತನ್ ಹತ್ಯೆ ಮಾಡಿದ್ದ. ಭದ್ರನ ಸಹೋದರ ನರಸಿಂಹ, ಚೇತನ್ನ ಕೊಲೆಗೆ ಸಂಚು ರೂಪಿಸಿದ್ದ. ಈ ವಿಚಾರ ತಿಳಿದ ಚೇತನ್, 2010ರಲ್ಲಿ ನರಸಿಂಹನ ಮೇಲೂ ಹಲ್ಲೆ ನಡೆಸಿದ್ದ. ಈ ಘಟನೆ ನಂತರ ಚೇತನ್ ವಿರುದ್ಧ ರಾಜಗೋಪಾಲ ನಗರ ಠಾಣೆ ಪೊಲೀಸರು ರೌಡಿಪಟ್ಟಿ ತೆರೆದಿದ್ದರು. ಜೈಲಿಂದ ಬಿಡುಗಡೆಯಾದ ಬಳಿಕ ಚೇತನ್ ರೌಡಿಸಂ ಬಿಟ್ಟು ಹಣಕಾಸು ಲೇವಾದೇವಿ ಮಾಡಿಕೊಂಡಿದ್ದ. ಆದರೆ, ನರಸಿಂಹ, ತನ್ನ ಸ್ನೇಹಿತರನ್ನು ಜತೆ ಸೇರಿ ಚೇತನ್ನನ್ನು ಕೊಲೆ ಮಾಡಿದ್ದ. ರೌಡಿ ಲಕ್ಷ್ಮಣ ಮತ್ತು ಆಟೋ ರಾಮನ ತಂಡದ ಜೊತೆಗೂ ನರಸಿಂಹ ಮುನಿಸಿಕೊಂಡಿದ್ದ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.