ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಈ ಗೂಂಡಾಗಿರಿ ಸಂಸ್ಕೃತಿ, ಅಧಿಕಾರ ದುರುಪಯೋಗ, ಕಾರ್ಯಕರ್ತರಿಗೆ ಬೆದರಿಕೆ ಹಾಕುವ ಕೆಲಸ ಮೊದಲಿನಿಂದಲೂ ಇತ್ತು. ಈ ಸಂಸ್ಕೃತಿ ಈಗ ಬಂದಿದೆಯೇ ಎಂಬುದನ್ನು ಕಾಂಗ್ರೆಸ್ ನಾಯಕರು ಬಹಿರಂಗಪಡಿಸಲಿ. ಹಿಂದೆ ಅವರು (ಮುನಿರತ್ನ) ಕಾಂಗ್ರೆಸ್ ಶಾಸಕರಾಗಿದ್ದರೇ ಆಗಿದ್ದವರಲ್ಲವೇ? ಆಗ ಪ್ರೇರಣೆ ನೀಡಿದ್ದು, ಬೆಂಬಲಕ್ಕೆ ನಿಂತಿದ್ದು ಯಾರು ಎಂಬುದನ್ನು ಕಾಂಗ್ರೆಸ್ ನಾಯಕರು ಜನರ ಮುಂದಿಡಲಿ ಎಂದು ಕುಟುಕಿದರು.