‘ಠಾಣಾ ವ್ಯಾಪ್ತಿಯ ಕೃಷ್ಣಮೂರ್ತಿ ಬಡಾವಣೆಯ ಮನೆಯೊಂದರ ಮೊದಲ ಮಹಡಿಯಲ್ಲಿ ವೃದ್ಧ ದಂಪತಿ ವಾಸವಿದ್ದರು.ನ.26ರ ರಾತ್ರಿ ಮನೆಗೆ ನುಗ್ಗಿದ್ದ ಆರೋಪಿಗಳು ಚಾಕು ತೋರಿಸಿ ದಂಪತಿ ಬಳಿ ಇದ್ದ ಚಿನ್ನದ ಸರ, ಮಾಂಗಲ್ಯ ಸರ, 5 ಚಿನ್ನದ ಉಂಗುರ ಹಾಗೂ ₹15 ಸಾವಿರ ನಗದು ಕಸಿದುಕೊಂಡು ಪರಾರಿಯಾಗಿದ್ದರು. ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿತ್ತು’ ಎಂದು ಪೊಲೀಸರು ತಿಳಿಸಿದ್ದಾರೆ.