ಬೆಂಗಳೂರು: ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘವು 2020ನೇ ಸಾಲಿನ ಪ್ರಶಸ್ತಿಗಳನ್ನು ಘೋಷಿಸಿದ್ದು,ಪ್ರಕಾಶಕರಿಗೆ ನೀಡುವ ‘ಪುಸ್ತಕ ರತ್ನ’ ಪ್ರಶಸ್ತಿಗೆ ಜಿ.ಎನ್. ಮೋಹನ್ ಅವರ ‘ಬಹುರೂಪಿ ಪ್ರಕಾಶನ’ ಆಯ್ಕೆಯಾಗಿದೆ.
‘ಸಾಹಿತ್ಯ ರತ್ನ’ ಪ್ರಶಸ್ತಿಗೆ ಜೋಗಿ ಅವರ ‘108–ನಾಲ್ಕು ದಶಕದ ಕತೆಗಳು’ ಕೃತಿ ಹಾಗೂ ‘ಚಿಗುರು’ ಪ್ರಶಸ್ತಿಗೆ ಮಂಜುಳಾ ಹಿರೇಮಠ ಅವರ ‘ಗಾಯಗೊಂಡವರಿಗೆ’ ಕೃತಿ ಆಯ್ಕೆಯಾಗಿವೆ. ಈ ಪ್ರಶಸ್ತಿಗಳು ತಲಾ ₹ 10 ಸಾವಿರ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ ಎಂದು ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.