<p><strong>ಬೆಂಗಳೂರು:</strong>ಚಂದ್ರಶೇಖರ ಭಂಡಾರಿ ಅವರ ಬರಹಗಳಲ್ಲಿ ಸಂಶೋಧಕನ ಪರಿಶ್ರಮ, ಅನುಭವಗಳ ಮಿಶ್ರಣ ಕಾಣುತ್ತಿದೆ ಎಂದು ಮಿಥಿಕ್ ಸೊಸೈಟಿಯ ಗೌರವ ಕಾರ್ಯದರ್ಶಿ ವಿ.ಎನ್.ನಾಗರಾಜ ಬಣ್ಣಿಸಿದರು.</p>.<p>ರಾಷ್ಟ್ರೋತ್ಥಾನ ಪರಿಷತ್ನಲ್ಲಿ ಶನಿವಾರ ಭಂಡಾರಿ ಅವರ ಸಾಹಿತ್ಯ ಕೃತಿಗಳ ವಿಮರ್ಶೆ ‘ಸಂಘಜೀವಿಯ ಸಾಹಿತ್ಯ ಯಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಇತಿಹಾಸದ ಘಟನೆಗಳನ್ನು ಕಥೆಯ ಶೈಲಿಯಲ್ಲಿ ಬರೆಯುವಾಗಲೂ ಅದರಲ್ಲಿ ಸತ್ಯಗಳಿರಬೇಕು; ವಸ್ತುನಿಷ್ಠವಾಗಿರಬೇಕು. ವಿಶ್ಲೇಷಣೆ ಇರಬೇಕು. ಇಲ್ಲಿ ಸಾಮಾನ್ಯ ಓದುಗನಿಗೆ ಬೇಕಾಗುವಂತೆ ಮನೋಜ್ಞವಾಗಿ ಚಿತ್ರಿಸಬೇಕು. ಆಳವಾದ ಅಧ್ಯಯನದ ಜತೆಗೆ ಸಮಾಜದಲ್ಲಿರುವ ಭಿನ್ನ ಮನಃಸ್ಥಿತಿಗಳ ಜನರನ್ನು ಅರ್ಥ ಮಾಡಿಕೊಳ್ಳಬೇಕು. ಭಂಡಾರಿಯವರಲ್ಲಿ ಇರುವ ಈ ಗುಣಗಳಿಂದ ಅವರ ಕೃತಿಯು ಜನರನ್ನು ಮುಟ್ಟುವಲ್ಲಿ ಯಶಸ್ವಿಯಾಗಿಸಿದೆ’ ಎಂದು ಹೇಳಿದರು.</p>.<p>‘ಈ ಕೃತಿ ಇತಿಹಾಸದ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಅಧ್ಯಯನಕಾರರಿಗೆ ಉಪಯುಕ್ತವಾಗಲಿದೆ’ ಎಂದು ಅಭಿಪ್ರಾಯಪಟ್ಟರು.</p>.<p>‘ಇತಿಹಾಸವನ್ನು ಎರಡು ಪ್ರಕಾರಗಳಲ್ಲಿ ಬರೆಯಲಾಗುತ್ತದೆ. ಒಂದು ನೇರವಾಗಿ ಘಟನಾವಳಿಗಳನ್ನು ಬರೆಯುವುದು. ಇನ್ನೊಂದು ಕಥನಶೈಲಿಯಲ್ಲಿ ನಿರೂಪಿಸುತ್ತಾ ಹೋಗುವುದು. ಕಥನ ಶೈಲಿಯ ನಿರೂಪಣೆಯಲ್ಲಿ ವಸ್ತು ಸಂಗತಿಗಳಿಗೆ ಭಂಗ ಬರದಂತೆ ನಿರೂಪಿಸಿದ್ದಾರೆ’ ಎಂದು ಹೇಳಿದರು.</p>.<p>ಕರ್ನಾಟಕ ವಿವಿ ಪ್ರಾಧ್ಯಾಪಕ ಹರ್ಷವರ್ಧನ ಶೀಲವಂತರ ಮಾತನಾಡಿ, ‘ವಸ್ತುಸ್ಥಿತಿಗೆ ಬದ್ಧವಾಗಿ ಯಾವುದೇ ಉತ್ಪ್ರೇಕ್ಷೆಗೂ ಹೋಗದೆ ಅನುವಾದ ಮಾಡುವುದು ಒಂದು ಸವಾಲು. ಭಾವಾರ್ಥಕ್ಕೆ ಗಂಟು ಬಿದ್ದವರು ಹೊಸದನ್ನೇ ಬರೆಯುವ ಸಾಧ್ಯತೆ ಇರುತ್ತದೆ. ಅನುವಾದಕನಿಗೆ ಈ ಎಚ್ಚರ ಇರಬೇಕು. ಆ ಎಚ್ಚರದಿಂದಲೇ ಭಂಡಾರಿಯವರು ಹಲವು ಕೃತಿಗಳನ್ನು ಅನುವಾದಿಸಿದ್ದಾರೆ’ ಎಂದರು.</p>.<p>‘ಸಂಘದ ಆರಂಭದ ದಿನಗಳಲ್ಲಿ ಮಂಗಳೂರು ಇದ್ದ ಬಗೆ, ಅಲ್ಲಿನ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿ ಕುರಿತು ವಿವರಿಸಿದ್ದಾರೆ. ಒಂದು ಗತಿಶೀಲ ಸಮಾಜದ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ.ಸಂಘದ ಯಾವುದೇ ಕಾರ್ಯಕರ್ತ ಗೆದ್ದು ಬದುಕಬೇಕು ಎಂಬ ದೃಷ್ಟಿಕೋನವನ್ನು ತಮ್ಮ ಕೃತಿಯಲ್ಲಿ ನಿರೂಪಿಸಿದ್ದಾರೆ’ ಎಂದು ಅವರು ಹೇಳಿದರು.</p>.<p>*<br />ಭಂಡಾರಿಯವರ ಸಮಾಜ ಮುಖಿಯಾದ ಸಾಹಿತ್ಯ ಹೆಚ್ಚು ಆಪ್ತವಾಗುತ್ತದೆ. ಅವರ ವಿಚಾರ ಪ್ರಸರಣ ಕಾರ್ಯ ಅಭಿನಂದನೀಯ.<br /><em><strong>-ದತ್ತಾತ್ರೇಯ ಹೊಸಬಾಳೆ, ಆರ್ಎಸ್ಎಸ್, ಸಹಕಾರ್ಯವಾಹ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong>ಚಂದ್ರಶೇಖರ ಭಂಡಾರಿ ಅವರ ಬರಹಗಳಲ್ಲಿ ಸಂಶೋಧಕನ ಪರಿಶ್ರಮ, ಅನುಭವಗಳ ಮಿಶ್ರಣ ಕಾಣುತ್ತಿದೆ ಎಂದು ಮಿಥಿಕ್ ಸೊಸೈಟಿಯ ಗೌರವ ಕಾರ್ಯದರ್ಶಿ ವಿ.ಎನ್.ನಾಗರಾಜ ಬಣ್ಣಿಸಿದರು.</p>.<p>ರಾಷ್ಟ್ರೋತ್ಥಾನ ಪರಿಷತ್ನಲ್ಲಿ ಶನಿವಾರ ಭಂಡಾರಿ ಅವರ ಸಾಹಿತ್ಯ ಕೃತಿಗಳ ವಿಮರ್ಶೆ ‘ಸಂಘಜೀವಿಯ ಸಾಹಿತ್ಯ ಯಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಇತಿಹಾಸದ ಘಟನೆಗಳನ್ನು ಕಥೆಯ ಶೈಲಿಯಲ್ಲಿ ಬರೆಯುವಾಗಲೂ ಅದರಲ್ಲಿ ಸತ್ಯಗಳಿರಬೇಕು; ವಸ್ತುನಿಷ್ಠವಾಗಿರಬೇಕು. ವಿಶ್ಲೇಷಣೆ ಇರಬೇಕು. ಇಲ್ಲಿ ಸಾಮಾನ್ಯ ಓದುಗನಿಗೆ ಬೇಕಾಗುವಂತೆ ಮನೋಜ್ಞವಾಗಿ ಚಿತ್ರಿಸಬೇಕು. ಆಳವಾದ ಅಧ್ಯಯನದ ಜತೆಗೆ ಸಮಾಜದಲ್ಲಿರುವ ಭಿನ್ನ ಮನಃಸ್ಥಿತಿಗಳ ಜನರನ್ನು ಅರ್ಥ ಮಾಡಿಕೊಳ್ಳಬೇಕು. ಭಂಡಾರಿಯವರಲ್ಲಿ ಇರುವ ಈ ಗುಣಗಳಿಂದ ಅವರ ಕೃತಿಯು ಜನರನ್ನು ಮುಟ್ಟುವಲ್ಲಿ ಯಶಸ್ವಿಯಾಗಿಸಿದೆ’ ಎಂದು ಹೇಳಿದರು.</p>.<p>‘ಈ ಕೃತಿ ಇತಿಹಾಸದ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಅಧ್ಯಯನಕಾರರಿಗೆ ಉಪಯುಕ್ತವಾಗಲಿದೆ’ ಎಂದು ಅಭಿಪ್ರಾಯಪಟ್ಟರು.</p>.<p>‘ಇತಿಹಾಸವನ್ನು ಎರಡು ಪ್ರಕಾರಗಳಲ್ಲಿ ಬರೆಯಲಾಗುತ್ತದೆ. ಒಂದು ನೇರವಾಗಿ ಘಟನಾವಳಿಗಳನ್ನು ಬರೆಯುವುದು. ಇನ್ನೊಂದು ಕಥನಶೈಲಿಯಲ್ಲಿ ನಿರೂಪಿಸುತ್ತಾ ಹೋಗುವುದು. ಕಥನ ಶೈಲಿಯ ನಿರೂಪಣೆಯಲ್ಲಿ ವಸ್ತು ಸಂಗತಿಗಳಿಗೆ ಭಂಗ ಬರದಂತೆ ನಿರೂಪಿಸಿದ್ದಾರೆ’ ಎಂದು ಹೇಳಿದರು.</p>.<p>ಕರ್ನಾಟಕ ವಿವಿ ಪ್ರಾಧ್ಯಾಪಕ ಹರ್ಷವರ್ಧನ ಶೀಲವಂತರ ಮಾತನಾಡಿ, ‘ವಸ್ತುಸ್ಥಿತಿಗೆ ಬದ್ಧವಾಗಿ ಯಾವುದೇ ಉತ್ಪ್ರೇಕ್ಷೆಗೂ ಹೋಗದೆ ಅನುವಾದ ಮಾಡುವುದು ಒಂದು ಸವಾಲು. ಭಾವಾರ್ಥಕ್ಕೆ ಗಂಟು ಬಿದ್ದವರು ಹೊಸದನ್ನೇ ಬರೆಯುವ ಸಾಧ್ಯತೆ ಇರುತ್ತದೆ. ಅನುವಾದಕನಿಗೆ ಈ ಎಚ್ಚರ ಇರಬೇಕು. ಆ ಎಚ್ಚರದಿಂದಲೇ ಭಂಡಾರಿಯವರು ಹಲವು ಕೃತಿಗಳನ್ನು ಅನುವಾದಿಸಿದ್ದಾರೆ’ ಎಂದರು.</p>.<p>‘ಸಂಘದ ಆರಂಭದ ದಿನಗಳಲ್ಲಿ ಮಂಗಳೂರು ಇದ್ದ ಬಗೆ, ಅಲ್ಲಿನ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿ ಕುರಿತು ವಿವರಿಸಿದ್ದಾರೆ. ಒಂದು ಗತಿಶೀಲ ಸಮಾಜದ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ.ಸಂಘದ ಯಾವುದೇ ಕಾರ್ಯಕರ್ತ ಗೆದ್ದು ಬದುಕಬೇಕು ಎಂಬ ದೃಷ್ಟಿಕೋನವನ್ನು ತಮ್ಮ ಕೃತಿಯಲ್ಲಿ ನಿರೂಪಿಸಿದ್ದಾರೆ’ ಎಂದು ಅವರು ಹೇಳಿದರು.</p>.<p>*<br />ಭಂಡಾರಿಯವರ ಸಮಾಜ ಮುಖಿಯಾದ ಸಾಹಿತ್ಯ ಹೆಚ್ಚು ಆಪ್ತವಾಗುತ್ತದೆ. ಅವರ ವಿಚಾರ ಪ್ರಸರಣ ಕಾರ್ಯ ಅಭಿನಂದನೀಯ.<br /><em><strong>-ದತ್ತಾತ್ರೇಯ ಹೊಸಬಾಳೆ, ಆರ್ಎಸ್ಎಸ್, ಸಹಕಾರ್ಯವಾಹ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>