<p><strong>ಬೆಂಗಳೂರು: </strong>ನಗರದ ಜನ ಭಾನುವಾರ ರಜೆಯನ್ನು ಸವಿಯುತ್ತಿದ್ದರೆ, ಜರಗನಹಳ್ಳಿ ಪರಿಸರದ ಜನ ಸಾರಕ್ಕಿ ಕೆರೆ ಬಳಿ ಪ್ಲಾಸ್ಟಿಕ್ ಕಸ ಹೆಕ್ಕುವುದರಲ್ಲಿ ನಿರತರಾಗಿದ್ದರು. ಕೆಲವೇ ತಾಸುಗಳಲ್ಲಿ ಇಲ್ಲಿ 2 ಟನ್ಗೂ ಅಧಿಕ ಪ್ಲಾಸ್ಟಿಕ್ ಕಸವನ್ನು ಸ್ಥಳೀಯರು ಸಂಗ್ರಹಿಸಿದರು.</p>.<p>ಇದಕ್ಕೆ ಅವಕಾಶ ಕಲ್ಪಿಸಿದ್ದು ಸಾರಕ್ಕಿ ಕೆರೆ ಮತ್ತು ಅಭಿವೃದ್ಧಿ ಟ್ರಸ್ಟ್ ಮತ್ತು ಜರಗನಹಳ್ಳಿ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದ (ಜಾರ್ವ) ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪ್ಲಾಗ್ ರನ್ ಕಾರ್ಯಕ್ರಮ. ಓಡುತ್ತಲೇ ಕಸ ಹೆಕ್ಕುವ ಈ ಕಾರ್ಯಕ್ರಮದಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೆ 100ಕ್ಕೂ ಅಧಿಕ ಮಂದಿ ಉತ್ಸಾಹದಿಂದ ಭಾಗಿಯಾದರು.</p>.<p>‘ಪ್ಲಾಗ್ ಮ್ಯಾನ್’ಎಂದೇ ಹೆಸರುವಾಸಿಯಾಗಿರುವ ನಾಗರಾಜ್ ಈ ಕಾರ್ಯಕ್ರಮಕ್ಕೆ ಮಾರ್ಗದರ್ಶನ ಮಾಡಿದರು. ಪರಿಸರವನ್ನು ಪ್ಲಾಸ್ಟಿಕ್ ಮುಕ್ತ ಗೊಳಿಸುವ ಹಾಗೂ ಆರೋಗ್ಯಯುತ ಜೀವನ ಶೈಲಿ ರೂಢಿಸಿಕೊಳ್ಳುವ ಮಹತ್ವದ ಬಗ್ಗೆ ತಿಳಿಹೇಳಿದರು.</p>.<p>ಟ್ರಸ್ಟ್ನ ಅಧ್ಯಕ್ಷ ಪ್ರೊ.ಕೆ.ಎಸ್. ಭಟ್, ‘ಕೆರೆಗೆ ಯಾರೂ ಕಸ ಹಾಕದಂತೆ ನೋಡಿಕೊಳ್ಳಬೇಕು. ಕೆರೆಯ ಬದಿಯಲ್ಲಿ ಕಂಡುಬರುವ ಕಸವನ್ನು ತಕ್ಷಣವೇ ಹೆಕ್ಕಿ ತೆಗೆದರೆ ಅದು ನೀರಿನೊಳಗೆ ಸೇರಿಕೊಳ್ಳುವುದನ್ನು ತಡೆಗಟ್ಟಬಹುದು. ಕೆರೆಯ ಒಡಲಿಗೆ ಕಸ ಸೇರಿಕೊಂಡರೆ ಇದರ ಇಡೀ ಪರಿಸರ ವ್ಯವಸ್ಥೆ ಹದಗೆಡುತ್ತದೆ’ ಎಂದರು.</p>.<p>ಜಾರ್ವ ಅಧ್ಯಕ್ಷ ಪುರುಷೋತ್ತಮ್, ‘ಜರಗ ಎಂದರೆ ಚಿನ್ನದ ದೂಳು. ಅಕ್ಕಸಾಲಿಗರು ಚಿನ್ನದ ಕೆಲಸ ಮಾಡುತ್ತಿದ್ದ ಈ ಜಾಗಕ್ಕೆ ಜರಗನಹಳ್ಳಿ ಎಂಬ ಹೆಸರು ಬಂದಿದೆ. ಚಿನ್ನದ ದೂಳು ತುಂಬಿದ್ದ ಜಾಗದಲ್ಲಿ, ಜನ ಈಗ ಕಸವನ್ನು ಹುಡುಕುವ ಹಾಗಾಗಿದೆ. ನಾವೆಲ್ಲರೂ ಜಾಗ್ರತೆಯಿಂದ ಕಸ ನಿರ್ವಹಣೆ ಮಾಡಬೇಕು’ ಎಂದು ಕಿವಿಮಾತು ಹೇಳಿದರು</p>.<p>ಬಿಬಿಎಂಪಿ ಹಾಗೂ ಲಯನ್ಸ್ ನಾಡಪ್ರಭು ಸಂಸ್ಥೆಗಳೂ ಈ ಕಾರ್ಯಕ್ರಮದಲ್ಲಿ ಕೈಜೋಡಿಸಿದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ನಗರದ ಜನ ಭಾನುವಾರ ರಜೆಯನ್ನು ಸವಿಯುತ್ತಿದ್ದರೆ, ಜರಗನಹಳ್ಳಿ ಪರಿಸರದ ಜನ ಸಾರಕ್ಕಿ ಕೆರೆ ಬಳಿ ಪ್ಲಾಸ್ಟಿಕ್ ಕಸ ಹೆಕ್ಕುವುದರಲ್ಲಿ ನಿರತರಾಗಿದ್ದರು. ಕೆಲವೇ ತಾಸುಗಳಲ್ಲಿ ಇಲ್ಲಿ 2 ಟನ್ಗೂ ಅಧಿಕ ಪ್ಲಾಸ್ಟಿಕ್ ಕಸವನ್ನು ಸ್ಥಳೀಯರು ಸಂಗ್ರಹಿಸಿದರು.</p>.<p>ಇದಕ್ಕೆ ಅವಕಾಶ ಕಲ್ಪಿಸಿದ್ದು ಸಾರಕ್ಕಿ ಕೆರೆ ಮತ್ತು ಅಭಿವೃದ್ಧಿ ಟ್ರಸ್ಟ್ ಮತ್ತು ಜರಗನಹಳ್ಳಿ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದ (ಜಾರ್ವ) ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪ್ಲಾಗ್ ರನ್ ಕಾರ್ಯಕ್ರಮ. ಓಡುತ್ತಲೇ ಕಸ ಹೆಕ್ಕುವ ಈ ಕಾರ್ಯಕ್ರಮದಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೆ 100ಕ್ಕೂ ಅಧಿಕ ಮಂದಿ ಉತ್ಸಾಹದಿಂದ ಭಾಗಿಯಾದರು.</p>.<p>‘ಪ್ಲಾಗ್ ಮ್ಯಾನ್’ಎಂದೇ ಹೆಸರುವಾಸಿಯಾಗಿರುವ ನಾಗರಾಜ್ ಈ ಕಾರ್ಯಕ್ರಮಕ್ಕೆ ಮಾರ್ಗದರ್ಶನ ಮಾಡಿದರು. ಪರಿಸರವನ್ನು ಪ್ಲಾಸ್ಟಿಕ್ ಮುಕ್ತ ಗೊಳಿಸುವ ಹಾಗೂ ಆರೋಗ್ಯಯುತ ಜೀವನ ಶೈಲಿ ರೂಢಿಸಿಕೊಳ್ಳುವ ಮಹತ್ವದ ಬಗ್ಗೆ ತಿಳಿಹೇಳಿದರು.</p>.<p>ಟ್ರಸ್ಟ್ನ ಅಧ್ಯಕ್ಷ ಪ್ರೊ.ಕೆ.ಎಸ್. ಭಟ್, ‘ಕೆರೆಗೆ ಯಾರೂ ಕಸ ಹಾಕದಂತೆ ನೋಡಿಕೊಳ್ಳಬೇಕು. ಕೆರೆಯ ಬದಿಯಲ್ಲಿ ಕಂಡುಬರುವ ಕಸವನ್ನು ತಕ್ಷಣವೇ ಹೆಕ್ಕಿ ತೆಗೆದರೆ ಅದು ನೀರಿನೊಳಗೆ ಸೇರಿಕೊಳ್ಳುವುದನ್ನು ತಡೆಗಟ್ಟಬಹುದು. ಕೆರೆಯ ಒಡಲಿಗೆ ಕಸ ಸೇರಿಕೊಂಡರೆ ಇದರ ಇಡೀ ಪರಿಸರ ವ್ಯವಸ್ಥೆ ಹದಗೆಡುತ್ತದೆ’ ಎಂದರು.</p>.<p>ಜಾರ್ವ ಅಧ್ಯಕ್ಷ ಪುರುಷೋತ್ತಮ್, ‘ಜರಗ ಎಂದರೆ ಚಿನ್ನದ ದೂಳು. ಅಕ್ಕಸಾಲಿಗರು ಚಿನ್ನದ ಕೆಲಸ ಮಾಡುತ್ತಿದ್ದ ಈ ಜಾಗಕ್ಕೆ ಜರಗನಹಳ್ಳಿ ಎಂಬ ಹೆಸರು ಬಂದಿದೆ. ಚಿನ್ನದ ದೂಳು ತುಂಬಿದ್ದ ಜಾಗದಲ್ಲಿ, ಜನ ಈಗ ಕಸವನ್ನು ಹುಡುಕುವ ಹಾಗಾಗಿದೆ. ನಾವೆಲ್ಲರೂ ಜಾಗ್ರತೆಯಿಂದ ಕಸ ನಿರ್ವಹಣೆ ಮಾಡಬೇಕು’ ಎಂದು ಕಿವಿಮಾತು ಹೇಳಿದರು</p>.<p>ಬಿಬಿಎಂಪಿ ಹಾಗೂ ಲಯನ್ಸ್ ನಾಡಪ್ರಭು ಸಂಸ್ಥೆಗಳೂ ಈ ಕಾರ್ಯಕ್ರಮದಲ್ಲಿ ಕೈಜೋಡಿಸಿದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>