<p><strong>ಬೆಂಗಳೂರು:</strong> ಸರ್ಜಾಪುರದ ದೊಡ್ಡಕೆರೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳು ದಂಧೆ ವಿರುದ್ಧ ಸ್ಥಳೀಯರು ಸಿಡಿದೆದ್ದಿದ್ದಾರೆ. ಈ ಕೆರೆಯನ್ನು ಉಳಿಸಲು ಪಣತೊಟ್ಟಿದ್ದಾರೆ.</p>.<p>‘ವಾಯ್ಸ್ ಆಫ್ ಸರ್ಜಾಪುರ’ ನೇತೃತ್ವದಲ್ಲಿ ಸರ್ಜಾಪುರದಲ್ಲಿಭಾನುವಾರ ಸಭೆ ನಡೆಸಿದ ಸ್ಥಳೀಯರು ಕೆರೆಯಲ್ಲಿ ಅಕ್ರಮವಾಗಿ ಮಣ್ಣು ತೆಗೆಯುತ್ತಿರುವ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಮಣ್ಣು ತೆಗೆಯಲು ಬಳಸುತ್ತಿದ್ದ ಜೆಸಿಬಿಯನ್ನು ವಶಕ್ಕೆ ಪಡೆದರು.</p>.<p>‘ಈ ಕೆರೆಯ ಮೇಲ್ಪದರದ ಮಣ್ಣಿನಲ್ಲಿ ಮರಳಿನಂಶ ಹೆಚ್ಚು ಇರುತ್ತದೆ. ನಿತ್ಯ ಏನಿಲ್ಲವೆಂದರೂ 30ಕ್ಕೂ ಅಧಿಕ ಲೋಡ್ ಮಣ್ಣು ಸಾಗಿಸಲಾಗುತ್ತದೆ. ಈ ಮಣ್ಣಿನಿಂದ ಫಿಲ್ಟರ್ ಮರಳು ಪಡೆಯುತ್ತಾರೆ. ಮುಗಳೂರು ಗ್ರಾಮದಲ್ಲಿ ದಕ್ಷಿಣ ಪಿನಾಕಿನಿ ನದಿಯ ಬಳಿ ಇಂತಹ ಫಿಲ್ಟರ್ ಮರಳು ದಂಧೆ ನಡೆಯುತ್ತಿದೆ. ಈ ಮಣ್ಣಿನಿಂದ ಮರಳನ್ನು ಬೇರ್ಪಡಿಸಲು ಈ ನದಿಯ ನೀರನ್ನು ಬಳಸಲಾಗುತ್ತಿದೆ’ ಎಂದು ಸ್ಥಳೀಯ ನಿವಾಸಿ ಶ್ರೀರಾಮುಲು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ದಶಕಗಳ ಹಿಂದೆ ಈ ಕೆರೆ ಮಳೆಗಾಲದಲ್ಲಿ ನೀರಿನಿಂದ ತುಂಬಿರುತ್ತಿತ್ತು. ಇಲ್ಲಿಗೆ ಸಾಕಷ್ಟು ಸಂಖ್ಯೆಯಲ್ಲಿ ಪಕ್ಷಿಗಳು ಬರುತ್ತಿದ್ದವು. ಇಲ್ಲಿ ಅಕ್ರಮ ಮರಳು ಗಣಿಗಾರಿಕೆ ಹೆಚ್ಚಾದ ಬಳಿಕ ಕೆರೆ ಬತ್ತಿದೆ. ಪಕ್ಷಿಗಳೂ ಕಣ್ಮರೆಯಾಗಿವೆ’ ಎಂದರು.</p>.<p>‘ಸರ್ಜಾಪುರ ಹೋಬಳಿಯ ಪಂಡಿತನಗರ ಕೆರೆ, ಚಿಕ್ಕಕೆರೆ, ಮುಗಳೂರು ಕೆರೆಗಳಲ್ಲೂ ಅಕ್ರಮ ಮರಳು ದಂಧೆ ನಡೆಯುತ್ತಿದೆ’ ಎಂದು ದೂರಿದರು.</p>.<p>ವಾಯ್ಸ್ ಆಫ್ ಸರ್ಜಾಪುರ ಸಂಘಟನೆಯ ರೈಸಿ, ‘ಯಮರೆ, ಇಟ್ಟಂಗೂರು ಹಾಗೂ ಸರ್ಜಾಪುರ ಗ್ರಾಮಗಳ ವ್ಯಾಪ್ತಿಯ ದೊಡ್ಡಕೆರೆ 204 ಎಕರೆಗಳಷ್ಟು ವಿಸ್ತೀರ್ಣ ಹೊಂದಿದೆ. ಕೆರೆ ಸಂರಕ್ಷಣೆಗೆ ಒತ್ತಾಯಿಸಿ ನಾವುಇದೇ 30ರಂದು ಜನ ಜಾಥಾ ಹಮ್ಮಿಕೊಳ್ಳಲಿದ್ದೇವೆ’ ಎಂದು ತಿಳಿಸಿದರು.</p>.<p>**</p>.<p><strong>‘ಗ್ರಾ. ಪಂ. ಸದಸ್ಯರು ಶಾಮೀಲು’</strong></p>.<p>‘ಅಕ್ರಮ ಮರಳು ದಂಧೆಯಲ್ಲಿ ಯಮರೆ ಹಾಗೂ ಸರ್ಜಾಪುರ ಗ್ರಾಮ ಪಂಚಾಯಿತಿಗಳ ಸದಸ್ಯರೂ ಭಾಗಿಯಾಗಿದ್ದಾರೆ. ಹಾಗಾಗಿ ರಾಜಾರೋಷವಾಗಿಯೇ ಕೆರೆಯ ಒಡಲನ್ನು ಬಗೆಯಲಾಗುತ್ತಿದೆ’ ಎಂದು ಸ್ಥಳೀಯರುಆರೋಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಸರ್ಜಾಪುರದ ದೊಡ್ಡಕೆರೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳು ದಂಧೆ ವಿರುದ್ಧ ಸ್ಥಳೀಯರು ಸಿಡಿದೆದ್ದಿದ್ದಾರೆ. ಈ ಕೆರೆಯನ್ನು ಉಳಿಸಲು ಪಣತೊಟ್ಟಿದ್ದಾರೆ.</p>.<p>‘ವಾಯ್ಸ್ ಆಫ್ ಸರ್ಜಾಪುರ’ ನೇತೃತ್ವದಲ್ಲಿ ಸರ್ಜಾಪುರದಲ್ಲಿಭಾನುವಾರ ಸಭೆ ನಡೆಸಿದ ಸ್ಥಳೀಯರು ಕೆರೆಯಲ್ಲಿ ಅಕ್ರಮವಾಗಿ ಮಣ್ಣು ತೆಗೆಯುತ್ತಿರುವ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಮಣ್ಣು ತೆಗೆಯಲು ಬಳಸುತ್ತಿದ್ದ ಜೆಸಿಬಿಯನ್ನು ವಶಕ್ಕೆ ಪಡೆದರು.</p>.<p>‘ಈ ಕೆರೆಯ ಮೇಲ್ಪದರದ ಮಣ್ಣಿನಲ್ಲಿ ಮರಳಿನಂಶ ಹೆಚ್ಚು ಇರುತ್ತದೆ. ನಿತ್ಯ ಏನಿಲ್ಲವೆಂದರೂ 30ಕ್ಕೂ ಅಧಿಕ ಲೋಡ್ ಮಣ್ಣು ಸಾಗಿಸಲಾಗುತ್ತದೆ. ಈ ಮಣ್ಣಿನಿಂದ ಫಿಲ್ಟರ್ ಮರಳು ಪಡೆಯುತ್ತಾರೆ. ಮುಗಳೂರು ಗ್ರಾಮದಲ್ಲಿ ದಕ್ಷಿಣ ಪಿನಾಕಿನಿ ನದಿಯ ಬಳಿ ಇಂತಹ ಫಿಲ್ಟರ್ ಮರಳು ದಂಧೆ ನಡೆಯುತ್ತಿದೆ. ಈ ಮಣ್ಣಿನಿಂದ ಮರಳನ್ನು ಬೇರ್ಪಡಿಸಲು ಈ ನದಿಯ ನೀರನ್ನು ಬಳಸಲಾಗುತ್ತಿದೆ’ ಎಂದು ಸ್ಥಳೀಯ ನಿವಾಸಿ ಶ್ರೀರಾಮುಲು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ದಶಕಗಳ ಹಿಂದೆ ಈ ಕೆರೆ ಮಳೆಗಾಲದಲ್ಲಿ ನೀರಿನಿಂದ ತುಂಬಿರುತ್ತಿತ್ತು. ಇಲ್ಲಿಗೆ ಸಾಕಷ್ಟು ಸಂಖ್ಯೆಯಲ್ಲಿ ಪಕ್ಷಿಗಳು ಬರುತ್ತಿದ್ದವು. ಇಲ್ಲಿ ಅಕ್ರಮ ಮರಳು ಗಣಿಗಾರಿಕೆ ಹೆಚ್ಚಾದ ಬಳಿಕ ಕೆರೆ ಬತ್ತಿದೆ. ಪಕ್ಷಿಗಳೂ ಕಣ್ಮರೆಯಾಗಿವೆ’ ಎಂದರು.</p>.<p>‘ಸರ್ಜಾಪುರ ಹೋಬಳಿಯ ಪಂಡಿತನಗರ ಕೆರೆ, ಚಿಕ್ಕಕೆರೆ, ಮುಗಳೂರು ಕೆರೆಗಳಲ್ಲೂ ಅಕ್ರಮ ಮರಳು ದಂಧೆ ನಡೆಯುತ್ತಿದೆ’ ಎಂದು ದೂರಿದರು.</p>.<p>ವಾಯ್ಸ್ ಆಫ್ ಸರ್ಜಾಪುರ ಸಂಘಟನೆಯ ರೈಸಿ, ‘ಯಮರೆ, ಇಟ್ಟಂಗೂರು ಹಾಗೂ ಸರ್ಜಾಪುರ ಗ್ರಾಮಗಳ ವ್ಯಾಪ್ತಿಯ ದೊಡ್ಡಕೆರೆ 204 ಎಕರೆಗಳಷ್ಟು ವಿಸ್ತೀರ್ಣ ಹೊಂದಿದೆ. ಕೆರೆ ಸಂರಕ್ಷಣೆಗೆ ಒತ್ತಾಯಿಸಿ ನಾವುಇದೇ 30ರಂದು ಜನ ಜಾಥಾ ಹಮ್ಮಿಕೊಳ್ಳಲಿದ್ದೇವೆ’ ಎಂದು ತಿಳಿಸಿದರು.</p>.<p>**</p>.<p><strong>‘ಗ್ರಾ. ಪಂ. ಸದಸ್ಯರು ಶಾಮೀಲು’</strong></p>.<p>‘ಅಕ್ರಮ ಮರಳು ದಂಧೆಯಲ್ಲಿ ಯಮರೆ ಹಾಗೂ ಸರ್ಜಾಪುರ ಗ್ರಾಮ ಪಂಚಾಯಿತಿಗಳ ಸದಸ್ಯರೂ ಭಾಗಿಯಾಗಿದ್ದಾರೆ. ಹಾಗಾಗಿ ರಾಜಾರೋಷವಾಗಿಯೇ ಕೆರೆಯ ಒಡಲನ್ನು ಬಗೆಯಲಾಗುತ್ತಿದೆ’ ಎಂದು ಸ್ಥಳೀಯರುಆರೋಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>