ಸಾವನದುರ್ಗದ ಪ್ರವಾಸ: ದಿಕ್ಕು ತಪ್ಪಿ 3 ದಿನ ಸಿಲುಕಿದ್ದ ವಿದ್ಯಾರ್ಥಿ ರಕ್ಷಣೆ

ಮಾಗಡಿ: ಸಾವನದುರ್ಗದ ಪ್ರವಾಸಕ್ಕೆ ಬಂದು ಬೆಟ್ಟ ಹತ್ತಿ ಇಳಿಯುವಾಗ ದಾರಿತಪ್ಪಿ ಬಿರುಕಿನಲ್ಲಿ ಮೂರು ದಿನ ಸಿಲುಕಿದ್ದ ವಿದ್ಯಾರ್ಥಿಯನ್ನು ಪೊಲೀಸರು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸೋಮವಾರ ರಕ್ಷಿಸಿದ್ದಾರೆ.
ಬೆಂಗಳೂರಿನ ನಾರಾಯಣ ಕಾಲೇಜಿನ ವಿದ್ಯಾರ್ಥಿ ಕೃತಿಕ್ ಎಂಬಾತನನ್ನು ರಕ್ಷಿಸಲಾಗಿದೆ. ಶುಕ್ರವಾರ ಸಾವನದುರ್ಗಕ್ಕೆ ಪ್ರವಾಸ ಬಂದಿದ್ದ ಆತ ಬೆಟ್ಟ ಹತ್ತಿ ಎರಡನೇ ಸುತ್ತಿನ ಕೋಟೆಯಲ್ಲಿ ಕೆಳಗೆ ಇಳಿಯುವ ವೇಳೆ ದಾರಿ ತಪ್ಪಿದ್ದರು. ಬಂಡೆಗಳ ಬಿರುಕಿನಲ್ಲಿ ಜಾರಿ ಮೂರು ದಿನ ಕಳೆದಿದ್ದರು.
ವಿದ್ಯಾರ್ಥಿಯ ತಂದೆ ಡಿ.ಆರ್.ಡಿ.ಒದಲ್ಲಿ ವಿಜ್ಞಾನಿಯಾಗಿದ್ದಾರೆ. ಅರಣ್ಯ ಸಿಬ್ಬಂದಿ ಮತ್ತು ಪೊಲೀಸರು ಕಾರ್ಯಾಚರಣೆ ನಡೆಸಿ ವಿದ್ಯಾರ್ಥಿಯನ್ನು ರಕ್ಷಿಸಿ ಪೋಷಕರ ವಶಕ್ಕೆ ಒಪ್ಪಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.