ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವನದುರ್ಗದ ಪ್ರವಾಸ: ದಿಕ್ಕು ತಪ್ಪಿ 3 ದಿನ ಸಿಲುಕಿದ್ದ ವಿದ್ಯಾರ್ಥಿ ರಕ್ಷಣೆ

Last Updated 8 ನವೆಂಬರ್ 2021, 18:37 IST
ಅಕ್ಷರ ಗಾತ್ರ

ಮಾಗಡಿ: ಸಾವನದುರ್ಗದ ಪ್ರವಾಸಕ್ಕೆ ಬಂದು ಬೆಟ್ಟ ಹತ್ತಿ ಇಳಿಯುವಾಗ ದಾರಿತಪ್ಪಿ ಬಿರುಕಿನಲ್ಲಿ ಮೂರು ದಿನ ಸಿಲುಕಿದ್ದ ವಿದ್ಯಾರ್ಥಿಯನ್ನು ಪೊಲೀಸರು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸೋಮವಾರ ರಕ್ಷಿಸಿದ್ದಾರೆ.

ಬೆಂಗಳೂರಿನ ನಾರಾಯಣ ಕಾಲೇಜಿನ ವಿದ್ಯಾರ್ಥಿಕೃತಿಕ್‌ ಎಂಬಾತನನ್ನು ರಕ್ಷಿಸಲಾಗಿದೆ. ಶುಕ್ರವಾರ ಸಾವನದುರ್ಗಕ್ಕೆ ಪ್ರವಾಸ ಬಂದಿದ್ದ ಆತ ಬೆಟ್ಟ ಹತ್ತಿ ಎರಡನೇ ಸುತ್ತಿನ ಕೋಟೆಯಲ್ಲಿ ಕೆಳಗೆ ಇಳಿಯುವ ವೇಳೆ ದಾರಿ ತಪ್ಪಿದ್ದರು. ಬಂಡೆಗಳ ಬಿರುಕಿನಲ್ಲಿ ಜಾರಿ ಮೂರು ದಿನ ಕಳೆದಿದ್ದರು.

ವಿದ್ಯಾರ್ಥಿಯ ತಂದೆ ಡಿ.ಆರ್‌.ಡಿ.ಒದಲ್ಲಿ ವಿಜ್ಞಾನಿಯಾಗಿದ್ದಾರೆ. ಅರಣ್ಯ ಸಿಬ್ಬಂದಿ ಮತ್ತು ಪೊಲೀಸರು ಕಾರ್ಯಾಚರಣೆ ನಡೆಸಿ ವಿದ್ಯಾರ್ಥಿಯನ್ನು ರಕ್ಷಿಸಿ ಪೋಷಕರ ವಶಕ್ಕೆ ಒಪ್ಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT