‘ವಿಧಾನಸೌಧ ಮತ್ತು ವಿಕಾಸೌಧದ ಹೊರತಾಗಿ ಎಂ.ಎಸ್. ಬಿಲ್ಡಿಂಗ್ನಲ್ಲೂ ಸಚಿವಾಲಯ ಇದೆ ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. 2001ರಲ್ಲಿ ವಿಧಾನಸೌಧ ಮತ್ತು ವಿಕಾಸೌಧಗಳ ನಡುವೆ ಹಾದುಹೋಗಿದ್ದ ರಸ್ತೆಯನ್ನು ಮುಚ್ಚಿದ ಬಳಿಕ ತಾತ್ಕಾಲಿಕವಾಗಿ ದೇವರಾಜ ಅರಸು ರಸ್ತೆಯನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ಬಳಿಕ, ಸಾರ್ವಜನಿಕರ ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗ ಒದಗಿಸುವುದನ್ನು ಮರೆತಿರುವ ಸರ್ಕಾರ, ಸಚಿವಾಲಯ ನೌಕರರ ಮೇಲೆ ಒತ್ತಡ ಸೃಷ್ಟಿಸಿದೆ’ ಎಂದು ಸಂಘದ ಜಂಟಿ ಕಾರ್ಯದರ್ಶಿ ಶಾಂತಾರಾಂ ದೂರಿದರು.