‘ನಾನು ಜನವರಿಯಲ್ಲಿ ದೇವಸ್ಥಾನಕ್ಕೆ ಹೋಗಿದ್ದಾಗ ಕಾಂಗ್ರೆಸ್ ತ್ಯಜಿಸದಂತೆ ದೇವರು ಆದೇಶ ಮಾಡಿದ್ದರಿಂದ ಅವರ ಆದೇಶದಂತೆ ನಡೆದುಕೊಂಡೆ. ಇತ್ತೀಚೆಗೆ ಮತ್ತೆ ದೇವಸ್ಥಾನಕ್ಕೆ ಹೋಗಿದ್ದೆ. ಈ ಬಾರಿ ದೇವರು, ನಿನಗೆ ಏನು ಒಳ್ಳೆಯದೆಂದು ಅನಿಸುತ್ತೊ ಅದನ್ನು ಮಾಡುಎಂದು ಹೇಳಿದರು. ಹೀಗಾಗಿ, ನಾನು ಬಿಜೆಪಿ ಸೇರಿದೆ’ ಎಂಬ ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್ ಮಾತುಗಳಿಗೆ ಧನ್ಯವಾದ ಹೇಳಲೇಬೇಕು. ದಿಗಂಬರ ಕಾಮತ್ ಅವರು ಈ ಅನೈತಿಕ ನಡೆಗೆ ದೇವರಿಂದ ನೈತಿಕ ಪ್ರತಿಕ್ರಿಯೆ ಹೇಗೆ ಪಡೆದರು? ಅವರು ದೇವರ ಜೊತೆ ಸಂಭಾಷಣೆ ನಡೆಸಲು ಹೇಗೆ ಸಾಧ್ಯವಾಯಿತು? ದೇವಸ್ಥಾನಕ್ಕೆ ಎರಡು ಬಾರಿ ಭೇಟಿ ನೀಡಿದಾಗಲೂ ದೇವರು ಅವರಿಗೆ ಅನುಕೂಲ ಮಾಡಿಕೊಟ್ಟಿದ್ದು ಹೇಗೆ ಎನ್ನುವುದು ನನಗೆ ಅಚ್ಚರಿ ತಂದಿದೆ’ ಎಂದೂ ವ್ಯಂಗ್ಯವಾಡಿದ್ದಾರೆ.