<p><strong>ಬೆಂಗಳೂರು: ‘</strong>ಹಿಂಸೆ, ಕೊಲೆ-ಸುಲಿಗೆ ತುಂಬಿರುವ ಜಗತ್ತಿನಲ್ಲಿ ಜನ್ನ ಕವಿ ಬರೆದಿರುವ ಯಶೋಧರ ಚರಿತೆ ಅಹಿಂಸೆಯನ್ನೇ ಮೂಲವಾಗಿ ಪ್ರತಿಪಾದಿಸುವ ಬಹು ಮುಖ್ಯ ಕೃತಿ’ ಎಂದು ನಿವೃತ್ತ ಪ್ರಾಧ್ಯಾಪಕ ಶಾಂತಿನಾಥ ದಿಬ್ಬದ ತಿಳಿಸಿದರು.</p>.<p>ಬೆಂಗಳೂರು ಸೆಂಟ್ರಲ್ ಜೈನ ಮಿಲನ್ ಸಂಸ್ಥೆ ಜಯನಗರದ ಶ್ರೀ ಚಕ್ರೇಶ್ವರಿ ಮಹಿಳಾ ಸಮಾಜದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜೈನ ಸಾಹಿತ್ಯ ಸಿರಿ ತಿಂಗಳ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.</p>.<p>‘ಅಹಿಂಸೆ ಕೇವಲ ಮಾನವ ಜನ್ಮಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ಅದು ಇಡೀ ಜೀವಸಂಕುಲಕ್ಕೆ ಅನ್ವಯಿಸುವಂತಹದ್ದು. ಜನ್ನನ ಈ ಕಾವ್ಯದಲ್ಲಿ ಮನಪರಿವರ್ತನೆಗೆ ಕಾಲಲಬ್ದಿ ಬಹಳ ಮುಖ್ಯ ಎಂದು ತಿಳಿಸಿದ್ದಾನೆ. ಕೊಂದರಷ್ಟೇ ಹಿಂಸೆಯಲ್ಲ, ಕೊಲ್ಲುತ್ತೇನೆ ಎಂದು ಯೋಚಿಸಿದರೂ ಅದೂ ಹಿಂಸೆಯೇ ಎಂಬ ಸಂದೇಶವನ್ನು ಈ ಕಾವ್ಯ ತಿಳಿಸುತ್ತದೆ’ ಎಂದು ಹೇಳಿದರು.</p>.<p>ನಿವೃತ್ತ ಅಧಿಕಾರಿ ಪಿ. ರತ್ನಾಕರ ಮಾತನಾಡಿ, ‘ಜನ್ನ ತನ್ನ ಕಾಲಘಟ್ಟದಲ್ಲಿ ಎರಡೂ ಧಾರ್ಮಿಕ ಕಾವ್ಯಗಳನ್ನು ಬರೆದು ಆ ಮೂಲಕ ಜೈನಧರ್ಮದ ತತ್ವಗಳನ್ನು ತಿಳಿಸುವ ಪ್ರಯತ್ನ ಮಾಡಿದ. ಆ ತತ್ವಗಳು ನಮಗೆ ಮನದಟ್ಟಾಗಬೇಕು’ ಎಂದರು.</p>.<p>ಜೈನ್ ಮಿಲನ್ ಸೆಂಟ್ರಲ್ ಘಟಕದ ಅಧ್ಯಕ್ಷೆ ಮಮತಾ ಕಾಂತರಾಜ್, ಚಕ್ರೇಶ್ವರಿ ಮಹಿಳಾ ಸಮಾಜದ ಅಧ್ಯಕ್ಷೆ ನಾಗಶ್ರೀ ಮುಪ್ಪಾನೆ, ಜೈನ ಸಾಹಿತ್ಯ ಸಿರಿ ಸಂಚಾಲಕರಾದ ಪದ್ಮಿನಿ ನಾಗರಾಜು, ಬ್ರಾಹ್ಮಿಲ ಮದನ್, ಪ್ರತಿಭಾ ರತ್ನಾಕರ ಉಪಸ್ಥಿತರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: ‘</strong>ಹಿಂಸೆ, ಕೊಲೆ-ಸುಲಿಗೆ ತುಂಬಿರುವ ಜಗತ್ತಿನಲ್ಲಿ ಜನ್ನ ಕವಿ ಬರೆದಿರುವ ಯಶೋಧರ ಚರಿತೆ ಅಹಿಂಸೆಯನ್ನೇ ಮೂಲವಾಗಿ ಪ್ರತಿಪಾದಿಸುವ ಬಹು ಮುಖ್ಯ ಕೃತಿ’ ಎಂದು ನಿವೃತ್ತ ಪ್ರಾಧ್ಯಾಪಕ ಶಾಂತಿನಾಥ ದಿಬ್ಬದ ತಿಳಿಸಿದರು.</p>.<p>ಬೆಂಗಳೂರು ಸೆಂಟ್ರಲ್ ಜೈನ ಮಿಲನ್ ಸಂಸ್ಥೆ ಜಯನಗರದ ಶ್ರೀ ಚಕ್ರೇಶ್ವರಿ ಮಹಿಳಾ ಸಮಾಜದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜೈನ ಸಾಹಿತ್ಯ ಸಿರಿ ತಿಂಗಳ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.</p>.<p>‘ಅಹಿಂಸೆ ಕೇವಲ ಮಾನವ ಜನ್ಮಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ಅದು ಇಡೀ ಜೀವಸಂಕುಲಕ್ಕೆ ಅನ್ವಯಿಸುವಂತಹದ್ದು. ಜನ್ನನ ಈ ಕಾವ್ಯದಲ್ಲಿ ಮನಪರಿವರ್ತನೆಗೆ ಕಾಲಲಬ್ದಿ ಬಹಳ ಮುಖ್ಯ ಎಂದು ತಿಳಿಸಿದ್ದಾನೆ. ಕೊಂದರಷ್ಟೇ ಹಿಂಸೆಯಲ್ಲ, ಕೊಲ್ಲುತ್ತೇನೆ ಎಂದು ಯೋಚಿಸಿದರೂ ಅದೂ ಹಿಂಸೆಯೇ ಎಂಬ ಸಂದೇಶವನ್ನು ಈ ಕಾವ್ಯ ತಿಳಿಸುತ್ತದೆ’ ಎಂದು ಹೇಳಿದರು.</p>.<p>ನಿವೃತ್ತ ಅಧಿಕಾರಿ ಪಿ. ರತ್ನಾಕರ ಮಾತನಾಡಿ, ‘ಜನ್ನ ತನ್ನ ಕಾಲಘಟ್ಟದಲ್ಲಿ ಎರಡೂ ಧಾರ್ಮಿಕ ಕಾವ್ಯಗಳನ್ನು ಬರೆದು ಆ ಮೂಲಕ ಜೈನಧರ್ಮದ ತತ್ವಗಳನ್ನು ತಿಳಿಸುವ ಪ್ರಯತ್ನ ಮಾಡಿದ. ಆ ತತ್ವಗಳು ನಮಗೆ ಮನದಟ್ಟಾಗಬೇಕು’ ಎಂದರು.</p>.<p>ಜೈನ್ ಮಿಲನ್ ಸೆಂಟ್ರಲ್ ಘಟಕದ ಅಧ್ಯಕ್ಷೆ ಮಮತಾ ಕಾಂತರಾಜ್, ಚಕ್ರೇಶ್ವರಿ ಮಹಿಳಾ ಸಮಾಜದ ಅಧ್ಯಕ್ಷೆ ನಾಗಶ್ರೀ ಮುಪ್ಪಾನೆ, ಜೈನ ಸಾಹಿತ್ಯ ಸಿರಿ ಸಂಚಾಲಕರಾದ ಪದ್ಮಿನಿ ನಾಗರಾಜು, ಬ್ರಾಹ್ಮಿಲ ಮದನ್, ಪ್ರತಿಭಾ ರತ್ನಾಕರ ಉಪಸ್ಥಿತರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>