ಕನ್ನಡ ಜನಶಕ್ತಿ ಕೇಂದ್ರ ಮಂಗಳವಾರ ಆಯೋಜಿಸಿದ್ದ ‘ಬೆಳ್ಳಿ ಸಂಭ್ರಮದ ಶಾಂತವೇರಿ ಗೋಪಾಲಗೌಡ’ ಪ್ರಶಸ್ತಿಯನ್ನು ಸಾಹಿತಿ ಬಿ. ಜಯಪ್ರಕಾಶ ಗೌಡ ಅವರಿಗೆ ಪ್ರದಾನ ಮಾಡಿ ಮಾತನಾಡಿದ ಅವರು, ‘ಶಾಂತವೇರಿ ಗೋಪಾಲಗೌಡರು ಹೋರಾಟದ ಮೂಲಕ ವಿಧಾನಸಭೆ ಪ್ರವೇಶಿಸಿದ್ದರು. ಆದರೆ, ಇಂದು ಜಾತಿ, ಧರ್ಮ, ಹಣ, ತೋಳ್ಬಲದ ಮೂಲಕ ಚುನಾವಣೆಗಳು ನಡೆಯುತ್ತಿವೆ. ಗೋಪಾಲಗೌಡ ಅವರಂತಹ ಮಹನೀಯರಿಗೆ ಸಾಕ್ಷಿಯಾಗಿದ್ದ ವಿಧಾನಸಭೆಯಲ್ಲಿ ಇಂದು ಶೇ 97ರಷ್ಟು ಕೋಟ್ಯಧಿಪತಿಗಳು, ಶೇ 55ರಷ್ಟು ಜನ ಕ್ರಿಮಿನಲ್ ಪ್ರಕರಣ ಹಿನ್ನಲೆಯವರು, ಶೇ 31ರಷ್ಟು ಜನ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರು ಇದ್ದಾರೆ’ ಎಂದು ತಿಳಿಸಿದರು.