‘ನಮ್ಮ ಮನದೊಳಗಿನ ಕಸವನ್ನು, ಕತ್ತಲನ್ನು ದೂರ ಮಾಡಲು ಇರುವ ಬೆಳಕು ಬಸವಣ್ಣ. ಜಾತಿ, ಲಿಂಗ, ಪ್ರದೇಶ, ಧರ್ಮಗಳನ್ನು ಮೀರಿದ ಮಾನವೀಯ ತತ್ವಗಳನ್ನು ಸಾರಿದ್ದರು. ಅನುಭವ ಮಂಟಪದಲ್ಲಿ ಹೆಣ್ಣುಮಕ್ಕಳಿಗೂ ಸಮಾನ ಸ್ಥಾನಮಾನ ನೀಡಿದ್ದರು. ನಾವು ಬದುಕಬೇಕು. ಬೇರೆಯವರನ್ನು ಬದುಕಿಸಬೇಕು. ಅದಕ್ಕಾಗಿ ಕಾಯಕ ಮತ್ತು ದಾಸೋಹ ತತ್ವವನ್ನು ನೀಡಿದ್ದರು’ ಎಂದು ನೆನಪು ಮಾಡಿಕೊಂಡರು.