<p><strong>ಬೆಂಗಳೂರು:</strong> ರಾಜಾಜಿನಗರದ ಪಾರ್ಶ್ವನಾಥ ಜೈನ್ ಶ್ವೇತಾಂಬರ ಮಂದಿರ ಟ್ರಸ್ಟ್ ವತಿಯಿಂದ ಡಿ.2ರಂದು ಅವಳಿ ಬಾಲಮುನಿಗಳಾದ ನಮಿಚಂದ್ರಸಾಗರ್ ಮತ್ತು ನೇಮಿಚಂದ್ರಸಾಗರ್ ಅವರ ಬಾಲಶತಾವಧಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.</p>.<p>ಮೆಡಿಟೇಷನ್ ರಿಸರ್ಚ್ ಪ್ರತಿಷ್ಠಾನದ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಪ್ರತಿಷ್ಠಾನದ ಸದಸ್ಯ ಕಮಲ್ ಜೈನ್, ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಶತಾವಧಾನದ ಮಾಹಿತಿ ನೀಡಿದರು.</p>.<p>‘ಅರಮನೆ ಮೈದಾನದಲ್ಲಿ ಬೆಳಿಗ್ಗೆ 9ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ, ಅವಳಿ ಬಾಲಮುನಿಗಳ ಸ್ಮರಣಶಕ್ತಿಯ ಸಾಮರ್ಥ್ಯವನ್ನು ಪರೀಕ್ಷಿಸಬಹುದು’ ಎಂದರು.</p>.<p>‘ಜೈನ ಧರ್ಮದ 5,000 ಶ್ಲೋಕಗಳಲ್ಲದೆ ಭಗವದ್ಗೀತೆ, ಖುರಾನ್, ಬೈಬಲ್ ಹಾಗೂ ಗುರುಗ್ರಂಥ ಸಾಹೀಬ್ ಧರ್ಮ ಗ್ರಂಥಗಳ ಕುರಿತು ಯಾವುದೇ ಪ್ರಶ್ನೆಗಳನ್ನು ಯಾವುದೇ ಭಾಷೆಯಲ್ಲಿ ಕೇಳಿದರೂ ಅದಕ್ಕೆ ಸಮರ್ಥವಾಗಿ ಉತ್ತರಿಸಲಿದ್ದಾರೆ’ ಎಂದು ಅವರು ಹೇಳಿದರು.</p>.<p>‘ಮುನಿಗಳು,ಗುಜರಾತಿನ ಸೂರತ್ ನಗರದ ಪಿಯೂಷ್ಭಾಯ್ ಮತ್ತು ಸೋನಲ್ಬೆನ್ ಅವರ ಅವಳಿ ಪುತ್ರರಾಗಿದ್ದಾರೆ.ಕೇವಲ ಒಂದನೇ ತರಗತಿಯವರೆಗೆ ವ್ಯಾಸಂಗ ಮಾಡಿದ್ದು, 9ನೇ ವಯಸ್ಸಿನಲ್ಲಿ ಸೂರತ್ ನಗರದಲ್ಲಿ ಸನ್ಯಾಸ ಜೀವನ ಸ್ವೀಕರಿಸಿದರು. ಈಗಾಗಲೇ 5 ಸಾವಿರ ಕಿ.ಮೀ ಪಾದಯಾತ್ರೆ ಮಾಡಿದ್ದಾರೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ರಾಜಾಜಿನಗರದ ಪಾರ್ಶ್ವನಾಥ ಜೈನ್ ಶ್ವೇತಾಂಬರ ಮಂದಿರ ಟ್ರಸ್ಟ್ ವತಿಯಿಂದ ಡಿ.2ರಂದು ಅವಳಿ ಬಾಲಮುನಿಗಳಾದ ನಮಿಚಂದ್ರಸಾಗರ್ ಮತ್ತು ನೇಮಿಚಂದ್ರಸಾಗರ್ ಅವರ ಬಾಲಶತಾವಧಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.</p>.<p>ಮೆಡಿಟೇಷನ್ ರಿಸರ್ಚ್ ಪ್ರತಿಷ್ಠಾನದ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಪ್ರತಿಷ್ಠಾನದ ಸದಸ್ಯ ಕಮಲ್ ಜೈನ್, ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಶತಾವಧಾನದ ಮಾಹಿತಿ ನೀಡಿದರು.</p>.<p>‘ಅರಮನೆ ಮೈದಾನದಲ್ಲಿ ಬೆಳಿಗ್ಗೆ 9ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ, ಅವಳಿ ಬಾಲಮುನಿಗಳ ಸ್ಮರಣಶಕ್ತಿಯ ಸಾಮರ್ಥ್ಯವನ್ನು ಪರೀಕ್ಷಿಸಬಹುದು’ ಎಂದರು.</p>.<p>‘ಜೈನ ಧರ್ಮದ 5,000 ಶ್ಲೋಕಗಳಲ್ಲದೆ ಭಗವದ್ಗೀತೆ, ಖುರಾನ್, ಬೈಬಲ್ ಹಾಗೂ ಗುರುಗ್ರಂಥ ಸಾಹೀಬ್ ಧರ್ಮ ಗ್ರಂಥಗಳ ಕುರಿತು ಯಾವುದೇ ಪ್ರಶ್ನೆಗಳನ್ನು ಯಾವುದೇ ಭಾಷೆಯಲ್ಲಿ ಕೇಳಿದರೂ ಅದಕ್ಕೆ ಸಮರ್ಥವಾಗಿ ಉತ್ತರಿಸಲಿದ್ದಾರೆ’ ಎಂದು ಅವರು ಹೇಳಿದರು.</p>.<p>‘ಮುನಿಗಳು,ಗುಜರಾತಿನ ಸೂರತ್ ನಗರದ ಪಿಯೂಷ್ಭಾಯ್ ಮತ್ತು ಸೋನಲ್ಬೆನ್ ಅವರ ಅವಳಿ ಪುತ್ರರಾಗಿದ್ದಾರೆ.ಕೇವಲ ಒಂದನೇ ತರಗತಿಯವರೆಗೆ ವ್ಯಾಸಂಗ ಮಾಡಿದ್ದು, 9ನೇ ವಯಸ್ಸಿನಲ್ಲಿ ಸೂರತ್ ನಗರದಲ್ಲಿ ಸನ್ಯಾಸ ಜೀವನ ಸ್ವೀಕರಿಸಿದರು. ಈಗಾಗಲೇ 5 ಸಾವಿರ ಕಿ.ಮೀ ಪಾದಯಾತ್ರೆ ಮಾಡಿದ್ದಾರೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>