ಕರ್ನಾಟಕ– ತಮಿಳುನಾಡು ರಾಜ್ಯಗಳ ನೀರಿನ ಸಮಸ್ಯೆಯ ಕುರಿತು ಬರೆದ ಸಂಶೋಧನಾತ್ಮಕ ಕೃತಿಗಳಾದ ‘ಕಾವೇರಿ ಒಂದು ಚಿಮ್ಮು, ಒಂದು ಹೊರಳು’ ಮತ್ತು ‘ನಮ್ಮ ನದಿಗಳು ಮತ್ತು ಸಮಸ್ಯೆಗಳು’ ಅವರಿಗೆ ಹೆಸರು ತಂದುಕೊಟ್ಟವು. ‘ಸೀಳುನಾಯಿ’, ‘ಮೊಲ್ಲೆ ಮಲ್ಲಿಗೆ’ ಸಹಿತ 6 ಕಥಾಸಂಕಲನಗಳು, ‘ಮೂಲಾನಕ್ಷತ್ರ’, ‘ಕಪಿಲೆ’, ‘ಎರಡು ಉಂಗುರ’ ಸಹಿತ 20 ಕಾದಂಬರಿ ಸೇರಿದಂತೆ 40ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ.