<p><strong>ಬೆಂಗಳೂರು</strong>: ರಾಜ್ಯ ಬಜೆಟ್ನಲ್ಲಿ ಶಿಕ್ಷಣ, ಅಲ್ಪಸಂಖ್ಯಾತ ಕಲ್ಯಾಣ, ಸಮಾಜ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಕ್ಷೇತ್ರಗಳಲ್ಲಿ ಸಾರ್ವಜನಿಕ ಹೂಡಿಕೆಯನ್ನು ಗಣನೀಯವಾಗಿ ಹೆಚ್ಚಿಸುವಂತೆ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಜೇಶನ್ ಆಫ್ ಇಂಡಿಯಾ (ಎಸ್ಐಒ) ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.</p><p>ಐದು ಪ್ರಮುಖ ಕ್ಷೇತ್ರಗಳನ್ನು ಒಳಗೊಂಡಿರುವ ಈ ಶಿಫಾರಸುಗಳ ಪತ್ರವನ್ನು ಎಸ್ಐಒ ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಹಯ್ಯಾನ್ ಸರ್ಕಾರಕ್ಕೆ ಸಲ್ಲಿಸಿ, ಶಿಕ್ಷಣವು ರಾಷ್ಟ್ರ ನಿರ್ಮಾಣದ ಮೂಲಾಧಾರವಾಗಿದ್ದು, ಸಮಾನ ಹಂಚಿಕೆ ಮತ್ತು ಕಟ್ಟುನಿಟ್ಟಿನ ಉತ್ತರದಾಯಿತ್ವ ಅಗತ್ಯ ಎಂದರು.</p><p>‘2025–26ರಲ್ಲಿ ಕರ್ನಾಟಕದ ಒಟ್ಟು ಬಜೆಟ್ನ ಶೇಕಡ 10.8 ರಷ್ಟು ಹಣವನ್ನು ಶಿಕ್ಷಣಕ್ಕೆ ಮೀಸಲಿಟ್ಟಿದೆ. ದೇಶದ ಸರಾಸರಿ ಹಂಚಿಕೆ ಶೇ 15 ಆಗಿದ್ದು, ಕೇರಳ ಮತ್ತು ತಮಿಳುನಾಡು ರಾಜ್ಯಗಳು ಈ ಮಟ್ಟದ ಹಂಚಿಕೆಯನ್ನು ನಿರಂತರವಾಗಿ ಪಾಲಿಸುತ್ತಿವೆ. ರಾಜ್ಯವು ಈ ಅಂತರವನ್ನು ನಿವಾರಿಸಬೇಕು’ ಎಂದು ಸಂಘಟನೆ ಮನವಿ ಮಾಡಿದೆ.</p>
<p><strong>ಬೆಂಗಳೂರು</strong>: ರಾಜ್ಯ ಬಜೆಟ್ನಲ್ಲಿ ಶಿಕ್ಷಣ, ಅಲ್ಪಸಂಖ್ಯಾತ ಕಲ್ಯಾಣ, ಸಮಾಜ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಕ್ಷೇತ್ರಗಳಲ್ಲಿ ಸಾರ್ವಜನಿಕ ಹೂಡಿಕೆಯನ್ನು ಗಣನೀಯವಾಗಿ ಹೆಚ್ಚಿಸುವಂತೆ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಜೇಶನ್ ಆಫ್ ಇಂಡಿಯಾ (ಎಸ್ಐಒ) ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.</p><p>ಐದು ಪ್ರಮುಖ ಕ್ಷೇತ್ರಗಳನ್ನು ಒಳಗೊಂಡಿರುವ ಈ ಶಿಫಾರಸುಗಳ ಪತ್ರವನ್ನು ಎಸ್ಐಒ ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಹಯ್ಯಾನ್ ಸರ್ಕಾರಕ್ಕೆ ಸಲ್ಲಿಸಿ, ಶಿಕ್ಷಣವು ರಾಷ್ಟ್ರ ನಿರ್ಮಾಣದ ಮೂಲಾಧಾರವಾಗಿದ್ದು, ಸಮಾನ ಹಂಚಿಕೆ ಮತ್ತು ಕಟ್ಟುನಿಟ್ಟಿನ ಉತ್ತರದಾಯಿತ್ವ ಅಗತ್ಯ ಎಂದರು.</p><p>‘2025–26ರಲ್ಲಿ ಕರ್ನಾಟಕದ ಒಟ್ಟು ಬಜೆಟ್ನ ಶೇಕಡ 10.8 ರಷ್ಟು ಹಣವನ್ನು ಶಿಕ್ಷಣಕ್ಕೆ ಮೀಸಲಿಟ್ಟಿದೆ. ದೇಶದ ಸರಾಸರಿ ಹಂಚಿಕೆ ಶೇ 15 ಆಗಿದ್ದು, ಕೇರಳ ಮತ್ತು ತಮಿಳುನಾಡು ರಾಜ್ಯಗಳು ಈ ಮಟ್ಟದ ಹಂಚಿಕೆಯನ್ನು ನಿರಂತರವಾಗಿ ಪಾಲಿಸುತ್ತಿವೆ. ರಾಜ್ಯವು ಈ ಅಂತರವನ್ನು ನಿವಾರಿಸಬೇಕು’ ಎಂದು ಸಂಘಟನೆ ಮನವಿ ಮಾಡಿದೆ.</p>