‘ಪದ್ಮನಾಭನಗರ ಕ್ಷೇತ್ರದ ಮಾರುತಿನಗರ, ಭವಾನಿನಗರ, ಎಸ್.ಕೆ.ಗಾರ್ಡನ್, ಸಿ.ವಿ.ರಾಮನ್ನಗರ ವಿಧಾನಸಭಾ ಕ್ಷೇತ್ರ, ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ಸೇರಿದಂತೆ ವಿವಿಧೆಡೆ ನೆಲೆಸಿರುವ ಬಡವರಿಗೆ ಹಕ್ಕುಪತ್ರ ವಿತರಿಸಬೇಕು. ನಿರ್ಗತಿಕರಿಗೆ ಸ್ವಂತ ಸೂರು ಕಲ್ಪಿಸಬೇಕು. ಜೈ ಭುವನೇಶ್ವರಿ ನಗರದಲ್ಲಿ ನಿರ್ಮಿಸಿರುವ ಮೇಲ್ಸೇತುವೆಗೆ ‘ಡಾ.ಭೀಮರಾವ್ ಅಂಬೇಡ್ಕರ್ ಸೇತುವೆ’ ಎಂದು ನಾಮಕರಣ ಮಾಡಬೇಕು. ಕೂಲಿ ನಗರ ಸೇತುವೆ ಬಳಿ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ಜಾಗ ಕಲ್ಪಿಸಬೇಕು’ ಎಂದೂ ಪ್ರತಿಭಟನ
ಕಾರರು ಆಗ್ರಹಿಸಿದರು.