<p><strong>ಬೆಂಗಳೂರು:</strong> ಬಾಲಕನೊಬ್ಬನನ್ನು ಯುವಕರ ಗುಂಪು ಸಂಪಂಗಿ ಕೆರೆಯಲ್ಲಿ ಬಲವಂತವಾಗಿ ಮುಳುಗಿಸುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.</p>.<p>ಬಾಲಕ ಹರ್ಷವರ್ಧನ್ ಎಂಬಾತನನ್ನು ಆರೋಪಿಗಳು ಕೆರೆಯಲ್ಲಿ ಮುಳುಗಿಸಿ ಕೊಲೆಗೆ ಯತ್ನಿಸಿದ್ದು, ಆರೋಪಿತರ ವಿರುದ್ಧ ಸಂಪಂಗಿ ರಾಮನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಾಲಕ ಅಪಾಯದಿಂದ ಪಾರಾಗಿದ್ದಾನೆ.</p>.<p>‘ಬಂಧಿತ ಎಲ್ಲ ನಾಲ್ವರು ಬಾಲಾಪರಾಧಿಗಳಾಗಿದ್ದು, ಶಾಲೆಗೆ ಸರಿಯಾಗಿ ಹೋಗುತ್ತಿರಲಿಲ್ಲ. ಅಲ್ಲದೆ, ಕೆಟ್ಟ ಚಟಗಳಿಗೆ ಬಲಿಯಾಗಿದ್ದಾರೆ. ಅವರನ್ನು ಬಾಲ ಮಂದಿರಕ್ಕೆ ಕಳುಹಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.</p>.<p>ಹರ್ಷವರ್ಧನ್ ಎಂಬ ಬಾಲಕ ಸ್ಥಳೀಯ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ನ.10ರಂದು ಸಂಜೆ ಹರ್ಷವರ್ಧನ್ನನ್ನು ಸಂಪಂಗಿ ಕೆರೆಗೆ ಕರೆದುಕೊಂಡು ಹೋದ ಆರೋಪಿತರು, ಈಜಾಡುವಂತೆ ಬಲವಂತವಾಗಿ ಮುಳುಗಿಸಿದ್ದಾರೆ.</p>.<p>‘ಈಜಲು ಬರಲ್ಲ ಅಣ್ಣ, ದಯವಿಟ್ಟು ಹೊರಗೆ ಕರೆದುಕೊಂಡು ಹೋಗಿ’ ಎಂದು ಬಾಲಕ ಮನವಿ ಮಾಡಿದರೂ ಬಿಡದ ಆರೋಪಿತರು, ಕಾಲು ಹಿಡಿದುಕೊಂಡು ಕೆರೆಯಲ್ಲಿ ಮುಳುಗಿಸುತ್ತಿರುವ ದೃಶ್ಯ ವಿಡಿಯೊದಲ್ಲಿದೆ.</p>.<p>ಈ ಸಂಬಂಧ ಬಾಲಕನ ಸಂಬಂಧಿ ನೀಡಿ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಬಾಲಕನೊಬ್ಬನನ್ನು ಯುವಕರ ಗುಂಪು ಸಂಪಂಗಿ ಕೆರೆಯಲ್ಲಿ ಬಲವಂತವಾಗಿ ಮುಳುಗಿಸುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.</p>.<p>ಬಾಲಕ ಹರ್ಷವರ್ಧನ್ ಎಂಬಾತನನ್ನು ಆರೋಪಿಗಳು ಕೆರೆಯಲ್ಲಿ ಮುಳುಗಿಸಿ ಕೊಲೆಗೆ ಯತ್ನಿಸಿದ್ದು, ಆರೋಪಿತರ ವಿರುದ್ಧ ಸಂಪಂಗಿ ರಾಮನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಾಲಕ ಅಪಾಯದಿಂದ ಪಾರಾಗಿದ್ದಾನೆ.</p>.<p>‘ಬಂಧಿತ ಎಲ್ಲ ನಾಲ್ವರು ಬಾಲಾಪರಾಧಿಗಳಾಗಿದ್ದು, ಶಾಲೆಗೆ ಸರಿಯಾಗಿ ಹೋಗುತ್ತಿರಲಿಲ್ಲ. ಅಲ್ಲದೆ, ಕೆಟ್ಟ ಚಟಗಳಿಗೆ ಬಲಿಯಾಗಿದ್ದಾರೆ. ಅವರನ್ನು ಬಾಲ ಮಂದಿರಕ್ಕೆ ಕಳುಹಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.</p>.<p>ಹರ್ಷವರ್ಧನ್ ಎಂಬ ಬಾಲಕ ಸ್ಥಳೀಯ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ನ.10ರಂದು ಸಂಜೆ ಹರ್ಷವರ್ಧನ್ನನ್ನು ಸಂಪಂಗಿ ಕೆರೆಗೆ ಕರೆದುಕೊಂಡು ಹೋದ ಆರೋಪಿತರು, ಈಜಾಡುವಂತೆ ಬಲವಂತವಾಗಿ ಮುಳುಗಿಸಿದ್ದಾರೆ.</p>.<p>‘ಈಜಲು ಬರಲ್ಲ ಅಣ್ಣ, ದಯವಿಟ್ಟು ಹೊರಗೆ ಕರೆದುಕೊಂಡು ಹೋಗಿ’ ಎಂದು ಬಾಲಕ ಮನವಿ ಮಾಡಿದರೂ ಬಿಡದ ಆರೋಪಿತರು, ಕಾಲು ಹಿಡಿದುಕೊಂಡು ಕೆರೆಯಲ್ಲಿ ಮುಳುಗಿಸುತ್ತಿರುವ ದೃಶ್ಯ ವಿಡಿಯೊದಲ್ಲಿದೆ.</p>.<p>ಈ ಸಂಬಂಧ ಬಾಲಕನ ಸಂಬಂಧಿ ನೀಡಿ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>