ಶಂಕರಮಠ ವಾರ್ಡ್ನ ಲಕ್ಷ್ಮೀನಗರದ ನಿವಾಸಿ ರವಿ ಅವರ ತಾಯಿಗೆ (70 ವರ್ಷ) ಅನಾರೋಗ್ಯ ಕಾಣಿಸಿಕೊಂಡಿತ್ತು. ಉಸಿರಾಟದ ಸಮಸ್ಯೆಯನ್ನೂ ಎದುರಿಸುತ್ತಿದ್ದರು. ಅವರನ್ನು ದಾಖಲಿಸಲು ಯಶವಂತಪುರದ ಪೀಪಲ್ ಟ್ರೀ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ಹಾಸಿಗೆ ಲಭ್ಯ ಇಲ್ಲ ಎಂಬ ಕಾರಣಕ್ಕೆ ರಾಮಯ್ಯ ಆಸ್ಪತ್ರೆಗೆ, ಬಳಿಕ ಅನನ್ಯ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿಂದ ಮಂಜುನಾಥ ನಗರದ ಕಾರ್ಡಿಯೊ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಎಕ್ಸ್– ರೇ ತೆಗೆದ ವೈದ್ಯಕೀಯ ಸಿಬ್ಬಂದಿ ರೋಗಿಯನ್ನು ಕೆ.ಸಿ ಜನರಲ್ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದರು.