ಕಳೆದ ವಾರವಷ್ಟೇ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಬಿ. ನಾಗೇಂದ್ರ ವಿರುದ್ಧದ ಪ್ರಕರಣದಲ್ಲಿ ಅವರ ಆಪ್ತ ಸಹಾಯಕ ಕೋರ್ಟ್ ಹಾಲ್ ಒಳಗೆ ಕುಳಿತಿದ್ದಾಗ ನ್ಯಾಯಾಧೀಶರು ಆತನನ್ನು ಉದ್ದೇಶಿಸಿ, ‘ನೀನು ಯಾರು’ ಎಂದು ಕೇಳಿದ್ದಾರೆ. ಆಗ ಆತ, ‘ನಾನು ನಾಗೇಂದ್ರ ಅವರ ಆಪ್ತ ಸಹಾಯಕ’ ಎಂದು ತಿಳಿಸಿದ್ದಕ್ಕೆ ಕುಪಿತರಾದ ನ್ಯಾಯಾಧೀಶರು, ‘ಇಲ್ಯಾಕ ಕುಂತಿ.. ಹೊರಾಗ ನಡೀ.. ಎಂದು ಹೇಳಿ ಕಳುಹಿಸಿದ್ದಾರೆ’ ಎಂಬುದು ಪ್ರತ್ಯಕ್ಷದರ್ಶಿಗಳ ವಿವರಣೆ.