ಚಾಲುಕ್ಯ ಸರ್ಕಲ್ನಿಂದ ಎಸ್ಟೀಮ್ಮಾಲ್ ವರೆಗೆ ಸ್ಟೀಲ್ಬ್ರಿಡ್ಜ್ನ ಅವಶ್ಯಕತೆ ಇದೆ. ಆದರೆ ಕೆಲವರು ರಾಜಕೀಯವಾಗಿ ಇದನ್ನು ವಿರೋಧಿಸಿದ್ದರು. ಹೀಗಾಗಿ ಯೋಜನೆ ಅರ್ಧಕ್ಕೆ ನಿಂತಿತ್ತು. ಪ್ರಸ್ತುತ ಈ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರ ಮುಂದೆ ತೆರೆದಿಡಲಾಗುತ್ತದೆ. ಯೋಜನೆಯ ಉದ್ದೇಶ, ಇದರ ವೆಚ್ಚ, ಇದರ ಉಪಯೋಗ ಎಲ್ಲವೂ ಕೂಡ ಜನರಿಗೆ ತಿಳಿಸಿ ಅವರ ಅಭಿಪ್ರಾಯ ಆಹ್ವಾನಿಸುತ್ತೇವೆ. ನಂತರದಲ್ಲಿಯೇ ಯೋಜನೆಯ ಅನುಷ್ಠಾನದ ಅಂತಿಮ ನಿರ್ಧಾರವನ್ನು ಸರಕಾರ ತೆಗೆದುಕೊಳ್ಳಲಿದೆ ಎಂದರು.