‘ಶುಕ್ರವಾರ ನಡೆದ ಕಾರ್ಯಕ್ರಮದ ವೇಳೆ ಲೋಕಸಭೆ ಸ್ಪೀಕರ್ಅವರ ಅಂಗರಕ್ಷಕರು, ಆಪ್ತ ಸಹಾಯಕರು, ಛಾಯಾಗ್ರಾಹಕರೂ ವಿಧಾನಸಭೆಯ ಒಳಕ್ಕೆ ಪ್ರವೇಶಿಸಿದ್ದರು. ವಿಧಾನಸಭೆಯ ನಿಯಮಾವಳಿಗಳನ್ನು ಗಾಳಿಗೆ ತೂರಿ ವರ್ತಿಸಿದ್ದಾರೆ. ಇದು ರಾಜ್ಯದ ವಿಧಾನಮಂಡಲದ ಮೇಲೆ ದೆಹಲಿ ದೊರೆಗಳಿಂದ ನಡೆದ ದಾಳಿ. ಇದಕ್ಕಾಗಿ ವಿಧಾನಸಭೆಯ ಅಧ್ಯಕ್ಷರು ಕ್ಷಮೆ ಯಾಚಿಸಬೇಕು’ ಎಂದು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.