<p><strong>ಬೆಂಗಳೂರು: </strong>ಎಚ್ಎಸ್ಆರ್ ಲೇಔಟ್ನ ಎಚ್.ಎನ್ ಟಾವರ್ಸ್ನಲ್ಲಿರುವ ‘ನ್ಯಾಷನಲ್ ಸ್ಟಾಕ್ ರಿಸರ್ಚ್’ ಕಂಪನಿ ಕಚೇರಿ ಮೇಲೆ ತೆಲಂಗಾಣ ಪೊಲೀಸರು ದಾಳಿ ನಡೆಸಿದ್ದು, ಇಬ್ಬರನ್ನು ಬಂಧಿಸಿದ್ದಾರೆ.</p>.<p>ಕಂಪನಿ ನಿರ್ದೇಶಕ ರಾಹುಲ್ಕುಮಾರ್ (27) ಹಾಗೂ ವ್ಯವಸ್ಥಾಪಕ ಬಂಡಲಪಾಳ್ಯ ಅನಂತಸೂರ್ಯ ಚೈತನ್ಯ (26) ಬಂಧಿತರು. ಇನ್ಸ್ಪೆಕ್ಟರ್ ಕೆ.ವಿ.ವಿಜಯ್ಕುಮಾರ್ ನೇತೃತ್ವದ ತಂಡ ಈ ದಾಳಿ ನಡೆಸಿದ್ದು,ಕಂಪನಿಯಲ್ಲಿದ್ದ ಹಲವು ದಾಖಲೆಗಳನ್ನೂ ಜಪ್ತಿ ಮಾಡಿದೆ.</p>.<p>‘ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ಹೇಳಿದ್ದ ಕಂಪನಿ ಪ್ರತಿನಿಧಿಗಳು, ಹೈದರಾಬಾದ್ ನಿವಾಸಿ ಶ್ರವಣ ಚೆಟ್ಟಿರೆಡ್ಡಿ ಎಂಬುವರಿಂದ ₹ 1.81 ಲಕ್ಷ ಪಡೆದು ವಂಚಿಸಿದ್ದರು. ಆ ಸಂಬಂಧ ರಾಜಕೊಂಡ ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಾಗಿದ್ದ ದೂರು ಆಧರಿಸಿ ಕಂಪನಿ ಮೇಲೆ ದಾಳಿ ಮಾಡಲಾಯಿತು’ ಎಂದು ತೆಲಂಗಾಣದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಎಚ್ಎಸ್ಆರ್ ಲೇಔಟ್ನ ಎಚ್.ಎನ್ ಟಾವರ್ಸ್ನಲ್ಲಿರುವ ‘ನ್ಯಾಷನಲ್ ಸ್ಟಾಕ್ ರಿಸರ್ಚ್’ ಕಂಪನಿ ಕಚೇರಿ ಮೇಲೆ ತೆಲಂಗಾಣ ಪೊಲೀಸರು ದಾಳಿ ನಡೆಸಿದ್ದು, ಇಬ್ಬರನ್ನು ಬಂಧಿಸಿದ್ದಾರೆ.</p>.<p>ಕಂಪನಿ ನಿರ್ದೇಶಕ ರಾಹುಲ್ಕುಮಾರ್ (27) ಹಾಗೂ ವ್ಯವಸ್ಥಾಪಕ ಬಂಡಲಪಾಳ್ಯ ಅನಂತಸೂರ್ಯ ಚೈತನ್ಯ (26) ಬಂಧಿತರು. ಇನ್ಸ್ಪೆಕ್ಟರ್ ಕೆ.ವಿ.ವಿಜಯ್ಕುಮಾರ್ ನೇತೃತ್ವದ ತಂಡ ಈ ದಾಳಿ ನಡೆಸಿದ್ದು,ಕಂಪನಿಯಲ್ಲಿದ್ದ ಹಲವು ದಾಖಲೆಗಳನ್ನೂ ಜಪ್ತಿ ಮಾಡಿದೆ.</p>.<p>‘ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ಹೇಳಿದ್ದ ಕಂಪನಿ ಪ್ರತಿನಿಧಿಗಳು, ಹೈದರಾಬಾದ್ ನಿವಾಸಿ ಶ್ರವಣ ಚೆಟ್ಟಿರೆಡ್ಡಿ ಎಂಬುವರಿಂದ ₹ 1.81 ಲಕ್ಷ ಪಡೆದು ವಂಚಿಸಿದ್ದರು. ಆ ಸಂಬಂಧ ರಾಜಕೊಂಡ ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಾಗಿದ್ದ ದೂರು ಆಧರಿಸಿ ಕಂಪನಿ ಮೇಲೆ ದಾಳಿ ಮಾಡಲಾಯಿತು’ ಎಂದು ತೆಲಂಗಾಣದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>