ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

’ನ್ಯಾಷನಲ್ ಸ್ಟಾಕ್ ರಿಸರ್ಚ್‌’ ಕಚೇರಿ ಮೇಲೆ ದಾಳಿ

ತೆಲಂಗಾಣ ಪೊಲೀಸರ ಕಾರ್ಯಾಚರಣೆ * ನಿರ್ದೇಶಕ ಸೇರಿ ಇಬ್ಬರ ಬಂಧನ
Last Updated 9 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಎಚ್‌ಎಸ್‌ಆರ್ ಲೇಔಟ್‌ನ ಎಚ್‌.ಎನ್‌ ಟಾವರ್ಸ್‌ನಲ್ಲಿರುವ ‘ನ್ಯಾಷನಲ್ ಸ್ಟಾಕ್ ರಿಸರ್ಚ್‌’ ಕಂಪನಿ ಕಚೇರಿ ಮೇಲೆ ತೆಲಂಗಾಣ ಪೊಲೀಸರು ದಾಳಿ ನಡೆಸಿದ್ದು, ಇಬ್ಬರನ್ನು ಬಂಧಿಸಿದ್ದಾರೆ.

ಕಂಪನಿ ನಿರ್ದೇಶಕ ರಾಹುಲ್‌ಕುಮಾರ್ (27) ಹಾಗೂ ವ್ಯವಸ್ಥಾಪಕ ಬಂಡಲಪಾಳ್ಯ ಅನಂತಸೂರ್ಯ ಚೈತನ್ಯ (26) ಬಂಧಿತರು. ಇನ್‌ಸ್ಪೆಕ್ಟರ್‌ ಕೆ.ವಿ.ವಿಜಯ್‌ಕುಮಾರ್ ನೇತೃತ್ವದ ತಂಡ ಈ ದಾಳಿ ನಡೆಸಿದ್ದು,ಕಂಪನಿಯಲ್ಲಿದ್ದ ಹಲವು ದಾಖಲೆಗಳನ್ನೂ ಜಪ್ತಿ ಮಾಡಿದೆ.

‘ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ಹೇಳಿದ್ದ ಕಂಪನಿ ಪ್ರತಿನಿಧಿಗಳು, ಹೈದರಾಬಾದ್‌ ನಿವಾಸಿ ಶ್ರವಣ ಚೆಟ್ಟಿರೆಡ್ಡಿ ಎಂಬುವರಿಂದ ₹ 1.81 ಲಕ್ಷ ಪಡೆದು ವಂಚಿಸಿದ್ದರು. ಆ ಸಂಬಂಧ ರಾಜಕೊಂಡ ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಾಗಿದ್ದ ದೂರು ಆಧರಿಸಿ ಕಂಪನಿ ಮೇಲೆ ದಾಳಿ ಮಾಡಲಾಯಿತು’ ಎಂದು ತೆಲಂಗಾಣದ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT