<p><strong>ಬೆಂಗಳೂರು</strong>: ಹೆಬ್ಬಾಳ ಹೊರವರ್ತುಲ ರಸ್ತೆಯಲ್ಲಿ ಶನಿವಾರ ರಾತ್ರಿ ಸುಡಾನ್ ಪ್ರಜೆಗಳು ಹೊಯ್ಸಳ ಗಸ್ತು ವಾಹನದಲ್ಲಿದ್ದ ಕಾನ್ಸ್ಟೆಬಲ್ ವಿಜಯ್ಕುಮಾರ್ ದಾನೇನವರ್ (32) ಎಂಬುವರ ಮೇಲೆ ಹಲ್ಲೆ ಮಾಡಿದ್ದಾರೆ.</p>.<p>ಅಮೃತಹಳ್ಳಿ ಠಾಣೆ ಕಾನ್ಸ್ಟೆಬಲ್ ಆಗಿರುವ ವಿಜಯ್ ಕುಮಾರ್ ಅವರ ಮುಖಕ್ಕೆ ತೀವ್ರ ಗಾಯವಾಗಿದ್ದು, ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಹೇಳಿಕೆ ಆಧರಿಸಿ ಸುಡಾನ್ ಪ್ರಜೆಗಳಾದ ಅಲ್ಪಾದುಲ್ಲ ಹಾಗೂಜಲಲ್ ಅಹಮ್ಮದ್ ಅಲ್ಸನ್ ಎಂಬುವರ ವಿರುದ್ಧ ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.</p>.<p>‘ವಿಜಯ್ಕುಮಾರ್ ಅವರು ಹೆಡ್ಕಾನ್ಸ್ಟೆಬಲ್ ಜೊತೆ ಹೊಯ್ಸಳ ವಾಹನದಲ್ಲಿ ಶನಿವಾರ ರಾತ್ರಿ ಗಸ್ತು ತಿರುಗುತ್ತಿದ್ದರು. ತಡರಾತ್ರಿ 1.30ರ ಸುಮಾರಿಗೆ ಹೊರವರ್ತುಲ ರಸ್ತೆಯ ಸರ್ವೀಸ್ ರಸ್ತೆಯಲ್ಲಿ ಆರೋಪಿಗಳು ಬೈಕ್ ನಿಲ್ಲಿಸಿಕೊಂಡು ನಿಂತಿದ್ದರು. ತಡರಾತ್ರಿಯಾಗಿದ್ದು ಮನೆಗೆ ಹೋಗುವಂತೆ ಕಾನ್ಸ್ಟೆಬಲ್ ಆರೋಪಿಗಳಿಗೆ ಹೇಳಿದ್ದರು’.</p>.<p>‘ಕಾನ್ಸ್ಟೆಬಲ್ ಅವರನ್ನೇ ಅವಾಚ್ಯ ಶಬ್ದಗಳಿಂದ ನಿಂದಿಸಿ, ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಅಷ್ಟರಲ್ಲೇ ಸ್ಥಳದಲ್ಲಿ ಸೇರಿದ್ದ ಜನರು ಆರೋಪಿಗಳನ್ನು ಹಿಡಿದುಕೊಂಡು, ಪೊಲೀಸರ ವಶಕ್ಕೆ ನೀಡಿದರು’ ಎಂದು ಮೂಲಗಳು ಹೇಳಿವೆ.</p>.<p>ಸುಡಾನ್ ಪ್ರಜೆಗಳು, ಅಪರಿಚಿತರು ಹಲ್ಲೆ ಮಾಡಿದ್ದಾರೆ ಪ್ರತಿ ದೂರು ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಹೆಬ್ಬಾಳ ಹೊರವರ್ತುಲ ರಸ್ತೆಯಲ್ಲಿ ಶನಿವಾರ ರಾತ್ರಿ ಸುಡಾನ್ ಪ್ರಜೆಗಳು ಹೊಯ್ಸಳ ಗಸ್ತು ವಾಹನದಲ್ಲಿದ್ದ ಕಾನ್ಸ್ಟೆಬಲ್ ವಿಜಯ್ಕುಮಾರ್ ದಾನೇನವರ್ (32) ಎಂಬುವರ ಮೇಲೆ ಹಲ್ಲೆ ಮಾಡಿದ್ದಾರೆ.</p>.<p>ಅಮೃತಹಳ್ಳಿ ಠಾಣೆ ಕಾನ್ಸ್ಟೆಬಲ್ ಆಗಿರುವ ವಿಜಯ್ ಕುಮಾರ್ ಅವರ ಮುಖಕ್ಕೆ ತೀವ್ರ ಗಾಯವಾಗಿದ್ದು, ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಹೇಳಿಕೆ ಆಧರಿಸಿ ಸುಡಾನ್ ಪ್ರಜೆಗಳಾದ ಅಲ್ಪಾದುಲ್ಲ ಹಾಗೂಜಲಲ್ ಅಹಮ್ಮದ್ ಅಲ್ಸನ್ ಎಂಬುವರ ವಿರುದ್ಧ ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.</p>.<p>‘ವಿಜಯ್ಕುಮಾರ್ ಅವರು ಹೆಡ್ಕಾನ್ಸ್ಟೆಬಲ್ ಜೊತೆ ಹೊಯ್ಸಳ ವಾಹನದಲ್ಲಿ ಶನಿವಾರ ರಾತ್ರಿ ಗಸ್ತು ತಿರುಗುತ್ತಿದ್ದರು. ತಡರಾತ್ರಿ 1.30ರ ಸುಮಾರಿಗೆ ಹೊರವರ್ತುಲ ರಸ್ತೆಯ ಸರ್ವೀಸ್ ರಸ್ತೆಯಲ್ಲಿ ಆರೋಪಿಗಳು ಬೈಕ್ ನಿಲ್ಲಿಸಿಕೊಂಡು ನಿಂತಿದ್ದರು. ತಡರಾತ್ರಿಯಾಗಿದ್ದು ಮನೆಗೆ ಹೋಗುವಂತೆ ಕಾನ್ಸ್ಟೆಬಲ್ ಆರೋಪಿಗಳಿಗೆ ಹೇಳಿದ್ದರು’.</p>.<p>‘ಕಾನ್ಸ್ಟೆಬಲ್ ಅವರನ್ನೇ ಅವಾಚ್ಯ ಶಬ್ದಗಳಿಂದ ನಿಂದಿಸಿ, ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಅಷ್ಟರಲ್ಲೇ ಸ್ಥಳದಲ್ಲಿ ಸೇರಿದ್ದ ಜನರು ಆರೋಪಿಗಳನ್ನು ಹಿಡಿದುಕೊಂಡು, ಪೊಲೀಸರ ವಶಕ್ಕೆ ನೀಡಿದರು’ ಎಂದು ಮೂಲಗಳು ಹೇಳಿವೆ.</p>.<p>ಸುಡಾನ್ ಪ್ರಜೆಗಳು, ಅಪರಿಚಿತರು ಹಲ್ಲೆ ಮಾಡಿದ್ದಾರೆ ಪ್ರತಿ ದೂರು ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>