‘ಸ್ವಲ್ಪ ಹೊತ್ತಿನಲ್ಲಿಯೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಪರಿಶೀಲನೆಯ ಉದ್ದೇಶದಿಂದ ಸುಮನಹಳ್ಳಿ ಚಿತಾಗಾರಕ್ಕೆ ಬಂದರು. ಅವರ ವಾಹನ ಬರುವುದಕ್ಕಿಂತ ಮುನ್ನ ಆಂಬುಲೆನ್ಸ್ ಒಂದು ಒಳಗೆ ಬಂದಿತು. ಆಂಬುಲೆನ್ಸ್ನಲ್ಲಿದ್ದ ವಾಹನ ಸಿ.ಟಿ. ರವಿಯವರ ಪರಿಚಿತರದ್ದು ಎಂದು ಉಳಿದವರು ಭಾವಿಸಿದರು. ಆದರೆ, ಆ ಆಂಬುಲೆನ್ಸ್ನಲ್ಲಿದ್ದ ಶವಕ್ಕೂ, ರವಿಯವರಿಗೂ ಸಂಬಂಧ ಇರಲಿಲ್ಲ. ಅವರ ವಾಹನದ ಜೊತೆಗೇ ಆಂಬುಲೆನ್ಸ್ ಒಳಗೆ ಬಂದಿದ್ದರಿಂದ ತಪ್ಪು ತಿಳಿವಳಿಕೆ ಉಂಟಾಯಿತು’ ಎಂದು ಅವರು ಹೇಳಿದರು.