<p><strong>ರಾಜರಾಜೇಶ್ವರಿನಗರ</strong>: ಸತ್ಯ, ನ್ಯಾಯ, ಪ್ರಾಮಾಣಿಕತೆಯನ್ನು ರಂಗಭೂಮಿ, ಪೌರಾಣಿಕ ನಾಟಕಗಳಿಂದ ಕಲಿಯಬಹುದು ಎಂದು ಶಾಸಕ ಮುನಿರತ್ನ ಅಭಿಪ್ರಾಯಪಟ್ಟರು.</p>.<p>ಹಿರಿಯ ರಂಗಭೂಮಿ ಕಲಾವಿದ, ನಗರಸಭೆ ಮಾಜಿ ಉಪಾಧ್ಯಕ್ಷ ಮುನಿವೆಂಕಟಪ್ಪ–ಪುಟ್ಟಮ್ಮ ಸವಿ ನೆನಪಿಗಾಗಿ ವಿನಾಯಕ ಕೃಪಾ ಘೋಷಿತ ನಾಟಕ ಮಂಡಳಿಯು ಕೆಂಗುಂಟೆಯ ಆಟದ ಮೈದಾನದಲ್ಲಿ ಹಮ್ಮಿಕೊಂಡಿದ್ದ ‘ದಾನಶೂರ ವೀರಕರ್ಣ’ ಅಥವಾ ‘ವೃಷಕೇತು ಪಟ್ಟಾಭಿಷೇಕ’ ಪೌರಾಣಿಕ ನಾಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಮುನಿ ವೆಂಕಟಪ್ಪ ಅವರು 50ಕ್ಕೂ ಹೆಚ್ಚು ಶ್ರೀರಾಮ, ಶ್ರೀಕೃಷ್ಣನ ಪಾತ್ರವನ್ನು ಅಭಿನಯಿಸುವ ಮೂಲಕ ರಂಗಭೂಮಿಯನ್ನು ಶ್ರೀಮಂತಗೊಳಿಸಿದ್ದರು. ಜೊತೆಗೆ ಸಮಾಜ ಮುಖಿ ಸೇವೆಯನ್ನು ಮಾಡಿದ್ದರು ಎಂದು ನೆನಪು ಮಾಡಿಕೊಂಡರು.</p>.<p>ಬೆಂಗಳೂರು ಕೇಂದ್ರ ಜಿಲ್ಲಾ ಬಿಜೆಪಿ ಎಸ್.ಸಿ. ಮೋರ್ಚಾ ಉಪಾಧ್ಯಕ್ಷ ಎಂ. ಮಂಜುನಾಥ್, ಬಿಜೆಪಿ ನಾಯಕ ಕೆ.ಎಸ್. ಯೋಗೇಶ್, <br> ನಗರ ಮಾಜಿ ಸದಸ್ಯ ಹನುಮೇಗೌಡ. ವಾರ್ಡ್ ಬಿಜೆಪಿ ಅಧ್ಯಕ್ಷ ಶಿವಶಂಕರ್, ಜಿಮ್ ರವಿಗೌಡ, ಎಂ.ಆರ್. ಕುಮಾರ್, ರಾಮಣ್ಣ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಜರಾಜೇಶ್ವರಿನಗರ</strong>: ಸತ್ಯ, ನ್ಯಾಯ, ಪ್ರಾಮಾಣಿಕತೆಯನ್ನು ರಂಗಭೂಮಿ, ಪೌರಾಣಿಕ ನಾಟಕಗಳಿಂದ ಕಲಿಯಬಹುದು ಎಂದು ಶಾಸಕ ಮುನಿರತ್ನ ಅಭಿಪ್ರಾಯಪಟ್ಟರು.</p>.<p>ಹಿರಿಯ ರಂಗಭೂಮಿ ಕಲಾವಿದ, ನಗರಸಭೆ ಮಾಜಿ ಉಪಾಧ್ಯಕ್ಷ ಮುನಿವೆಂಕಟಪ್ಪ–ಪುಟ್ಟಮ್ಮ ಸವಿ ನೆನಪಿಗಾಗಿ ವಿನಾಯಕ ಕೃಪಾ ಘೋಷಿತ ನಾಟಕ ಮಂಡಳಿಯು ಕೆಂಗುಂಟೆಯ ಆಟದ ಮೈದಾನದಲ್ಲಿ ಹಮ್ಮಿಕೊಂಡಿದ್ದ ‘ದಾನಶೂರ ವೀರಕರ್ಣ’ ಅಥವಾ ‘ವೃಷಕೇತು ಪಟ್ಟಾಭಿಷೇಕ’ ಪೌರಾಣಿಕ ನಾಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಮುನಿ ವೆಂಕಟಪ್ಪ ಅವರು 50ಕ್ಕೂ ಹೆಚ್ಚು ಶ್ರೀರಾಮ, ಶ್ರೀಕೃಷ್ಣನ ಪಾತ್ರವನ್ನು ಅಭಿನಯಿಸುವ ಮೂಲಕ ರಂಗಭೂಮಿಯನ್ನು ಶ್ರೀಮಂತಗೊಳಿಸಿದ್ದರು. ಜೊತೆಗೆ ಸಮಾಜ ಮುಖಿ ಸೇವೆಯನ್ನು ಮಾಡಿದ್ದರು ಎಂದು ನೆನಪು ಮಾಡಿಕೊಂಡರು.</p>.<p>ಬೆಂಗಳೂರು ಕೇಂದ್ರ ಜಿಲ್ಲಾ ಬಿಜೆಪಿ ಎಸ್.ಸಿ. ಮೋರ್ಚಾ ಉಪಾಧ್ಯಕ್ಷ ಎಂ. ಮಂಜುನಾಥ್, ಬಿಜೆಪಿ ನಾಯಕ ಕೆ.ಎಸ್. ಯೋಗೇಶ್, <br> ನಗರ ಮಾಜಿ ಸದಸ್ಯ ಹನುಮೇಗೌಡ. ವಾರ್ಡ್ ಬಿಜೆಪಿ ಅಧ್ಯಕ್ಷ ಶಿವಶಂಕರ್, ಜಿಮ್ ರವಿಗೌಡ, ಎಂ.ಆರ್. ಕುಮಾರ್, ರಾಮಣ್ಣ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>