ಈ ಮಧ್ಯದ ಕಾಲುವೆ ಈಗ ದುಸ್ಥಿತಿಯಲ್ಲಿದ್ದು, ತ್ಯಾಜ್ಯ ಸುರಿಯಲಾಗುತ್ತಿದೆ. ಬೀದಿ ಬದಿ ವ್ಯಾಪಾರಿಗಳು ನಿತ್ಯವೂ, ಕಾಫಿ, ಟೀ, ಪಾನಿಪುರಿ ಲೋಟಗಳನ್ನು ತಂದು ಎಸೆಯುತ್ತಿದ್ದಾರೆ. ಗಿಡಗಂಟಿಗಳು ಬೆಳೆದು ನಿಂತು ಕಾಲುವೆಯ ಅಸ್ತಿತ್ವವೇ ಕಾಣದಾಗಿದೆ. ಸ್ವಚ್ಛಗೊಳಿಸಿ ವರ್ಷಗಳೇ ಕಳೆದಿರುವುದರಿಂದ ಕಾಲುವೆಯಲ್ಲಿ ನೀರು ಹರಿಯದೇ ನಿಂತಲ್ಲೇ ನಿಲ್ಲುತ್ತಿದೆ. ನೀರು ಮಲಿನಗೊಂಡು, ಸೊಳ್ಳೆ, ಕ್ರಿಮಿ-ಕೀಟಗಳ ಆವಸವಾಗುತ್ತಿದೆ. ತ್ಯಾಜ್ಯ ಕೊಳೆತು ವಾಸನೆ ಬರುತ್ತಿದೆ.