‘ಸಸಿ ನೆಡಲು ಸದ್ಗುರು ಜಗ್ಗಿ ವಾಸುದೇವ ನೇತೃತ್ವದ ಈಶಾ ಔಟ್ರೀಚ್
ಸಂಸ್ಥೆ ಸಾರ್ವಜನಿಕರಿಂದ ಹಣ ಸಂಗ್ರಹಿಸು
ತ್ತಿದೆ. ಸರ್ಕಾರಿ ಭೂಮಿಯಲ್ಲಿ ಸಸಿ ನೆಡಲು
ಯಾವುದೇ ಅನುಮತಿ ಪಡೆದು
ಕೊಂಡಿಲ್ಲ’ ಎಂದು 2019ರಲ್ಲಿ ಸಾರ್ವಜ
ನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು.
ಅದನ್ನು ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠ, ಸ್ವಯಂ ಪ್ರೇರಿತ ಅರ್ಜಿಯಾಗಿ ಪರಿವರ್ತಿಸಿಕೊಂಡಿತ್ತು. ‘ಇದು ಸರ್ಕಾರಿ ಯೋಜನೆಯಲ್ಲ ಮತ್ತು ಸರ್ಕಾರದ ಜಾಗದಲ್ಲಿ ಸಸಿಗಳನ್ನು ನೆಡುತ್ತಿಲ್ಲ’ ಎಂದು ಸರ್ಕಾರ ನೀಡಿದ್ದ ಹೇಳಿಕೆ ಗಮನಿಸಿದ ಪೀಠ, ‘ಒಂದು ವೇಳೆ ಸರ್ಕಾರಿ ಜಾಗದಲ್ಲೇ ಮರಗಳನ್ನು ಬೆಳಸಿದ್ದರೂ ಅದನ್ನು ನಿಷೇಧಿಸುವುದು ವಿನಾಶಕ್ಕೆ ಹಾದಿ ಮಾಡಿಕೊಟ್ಟಂತೆ’ ಎಂದು ಅಭಿಪ್ರಾಯಪಟ್ಟಿತು.