<p><strong>ಬೆಂಗಳೂರು:</strong> ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯಕ್ಕೆ ಅಗತ್ಯ ಪ್ರಮಾಣದ ರೆಮ್ಡಿಸಿವಿರ್ ಚುಚ್ಚು ಮದ್ದು ಸರಬರಾಜು ಮಾಡದ ಸಿಪ್ಲಾ ಮತ್ತು ಜುಬಿಲಿಯೆಂಟ್ ಔಷಧ ಕಂಪನಿಗಳಿಗೆ ರಾಜ್ಯ ಸರ್ಕಾರ ಮಂಗಳವಾರ ನೋಟಿಸ್ ನೀಡಿದೆ.</p>.<p>‘ನೋಟಿಸ್ ಸಿಕ್ಕಿದ 24 ಗಂಟೆಗಳಲ್ಲಿ ರೆಮ್ಡಿಸಿವಿರ್ ಚುಚ್ಚುಮದ್ದು ಪೂರೈಸ ಬೇಕು. ಪೂರೈಸದೇ ಇದ್ದರೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ನೋಟಿಸ್ನಲ್ಲಿ ಎಚ್ಚರಿಕೆ ನೀಡಲಾಗಿದೆ.</p>.<p>ಮೇ 9ರ ಒಳಗೆ ಕರ್ನಾಟಕಕ್ಕೆ 30 ಸಾವಿರ ವೈಯಲ್ಸ್ ರೆಮ್ಡಿಸಿವಿರ್ ಪೂರೈಸುವಂತೆ ಸಿಪ್ಲಾ ಕಂಪನಿಗೆ ಹಾಗೂ 32 ಸಾವಿರ ವೈಯಲ್ಸ್ ಪೂರೈಸುವಂತೆ ಜುಬಿಲಿಯೆಂಟ್ ಕಂಪನಿಗಳಿಗೆ ಮೇ 1 ರಂದು ಸೂಚಿಸಲಾಗಿತ್ತು. ಆದರೆ, ಮೇ 8ರವರೆಗೆ ಸಿಪ್ಲಾ ಕಂಪನಿ 10,840 ಮತ್ತು ಜುಬಿಲಿಯೆಂಟ್ ಕಂಪನಿ 17,601 ವೈಯಲ್ಸ್ ಮಾತ್ರ ಸರಬರಾಜು ಮಾಡಿದೆ.</p>.<p>‘ಕೇಂದ್ರ ಸೂಚಿಸಿದರೂ ರಾಜ್ಯಕ್ಕೆ ಸಕಾಲದಲ್ಲಿ ರೆಮ್ಡಿಸಿವಿರ್ ಪೂರೈಸದೇ ಇರುವುದರಿಂದ ಕೋವಿಡ್ ರೋಗಿಗಳ ಚಿಕಿತ್ಸೆ ಮೇಲೆ ಗಂಭೀರ ಪರಿಣಾಮ ಬೀರಿದೆ. ಹೀಗಾಗಿ, ನೋಟಿಸ್ ತಲುಪಿದ 24 ಗಂಟೆಯ ಒಳಗೆ ಬಾಕಿ ವೈಯಲ್ಸ್ಗಳನ್ನು ಪೂರೈಸಬೇಕು’ ಎಂದು ನೋಟಿಸ್ನಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯಕ್ಕೆ ಅಗತ್ಯ ಪ್ರಮಾಣದ ರೆಮ್ಡಿಸಿವಿರ್ ಚುಚ್ಚು ಮದ್ದು ಸರಬರಾಜು ಮಾಡದ ಸಿಪ್ಲಾ ಮತ್ತು ಜುಬಿಲಿಯೆಂಟ್ ಔಷಧ ಕಂಪನಿಗಳಿಗೆ ರಾಜ್ಯ ಸರ್ಕಾರ ಮಂಗಳವಾರ ನೋಟಿಸ್ ನೀಡಿದೆ.</p>.<p>‘ನೋಟಿಸ್ ಸಿಕ್ಕಿದ 24 ಗಂಟೆಗಳಲ್ಲಿ ರೆಮ್ಡಿಸಿವಿರ್ ಚುಚ್ಚುಮದ್ದು ಪೂರೈಸ ಬೇಕು. ಪೂರೈಸದೇ ಇದ್ದರೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ನೋಟಿಸ್ನಲ್ಲಿ ಎಚ್ಚರಿಕೆ ನೀಡಲಾಗಿದೆ.</p>.<p>ಮೇ 9ರ ಒಳಗೆ ಕರ್ನಾಟಕಕ್ಕೆ 30 ಸಾವಿರ ವೈಯಲ್ಸ್ ರೆಮ್ಡಿಸಿವಿರ್ ಪೂರೈಸುವಂತೆ ಸಿಪ್ಲಾ ಕಂಪನಿಗೆ ಹಾಗೂ 32 ಸಾವಿರ ವೈಯಲ್ಸ್ ಪೂರೈಸುವಂತೆ ಜುಬಿಲಿಯೆಂಟ್ ಕಂಪನಿಗಳಿಗೆ ಮೇ 1 ರಂದು ಸೂಚಿಸಲಾಗಿತ್ತು. ಆದರೆ, ಮೇ 8ರವರೆಗೆ ಸಿಪ್ಲಾ ಕಂಪನಿ 10,840 ಮತ್ತು ಜುಬಿಲಿಯೆಂಟ್ ಕಂಪನಿ 17,601 ವೈಯಲ್ಸ್ ಮಾತ್ರ ಸರಬರಾಜು ಮಾಡಿದೆ.</p>.<p>‘ಕೇಂದ್ರ ಸೂಚಿಸಿದರೂ ರಾಜ್ಯಕ್ಕೆ ಸಕಾಲದಲ್ಲಿ ರೆಮ್ಡಿಸಿವಿರ್ ಪೂರೈಸದೇ ಇರುವುದರಿಂದ ಕೋವಿಡ್ ರೋಗಿಗಳ ಚಿಕಿತ್ಸೆ ಮೇಲೆ ಗಂಭೀರ ಪರಿಣಾಮ ಬೀರಿದೆ. ಹೀಗಾಗಿ, ನೋಟಿಸ್ ತಲುಪಿದ 24 ಗಂಟೆಯ ಒಳಗೆ ಬಾಕಿ ವೈಯಲ್ಸ್ಗಳನ್ನು ಪೂರೈಸಬೇಕು’ ಎಂದು ನೋಟಿಸ್ನಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>