ಅಶೋಕ್ ಹಾರನಹಳ್ಳಿ ಮಾತನಾಡಿ, ‘ಮಹಾಸಭಾದ ಬೈಲಾ ದಶಕಗಳ ಹಿಂದೆ ರಚನೆಗೊಂಡಿದ್ದು, ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ತಿದ್ದುಪಡಿ ಅವಶ್ಯಕತೆ ಇದೆ. ತಜ್ಞರು, ಅನುಭವಿ ವಕೀಲರು, ವಿವಿಧ ಜಿಲ್ಲಾ ಘಟಕಗಳ ಅಧ್ಯಕ್ಷರನ್ನು ಒಳಗೊಂಡ ಸಮಿತಿ ಸಮಗ್ರ ಅಧ್ಯಯನ ನಡೆಸಿ ಸೂಚಿಸಿದ ಶಿಫಾರಸು ಅಳವಡಿಸಿಕೊಂಡು ಬೈಲಾಕ್ಕೆ ತಿದ್ದುಪಡಿ ತರಲಾಗಿದೆ. ಕಾರ್ಯಕಾರಿ ಸಮಿತಿ ಮುಂದಿಟ್ಟು ಒಪ್ಪಿಗೆ ಪಡೆಯಲಾಗಿದೆ’ ಎಂದರು.