‘ನಿರ್ಮಲ್ ಅವರು ಬಿದರಹಳ್ಳಿಯಲ್ಲಿ ಕಾರ್ಖಾನೆಯೊಂದನ್ನು ನಡೆಸುತ್ತಾರೆ. ಎಂದಿನಂತೆ ಅವರು ಬೆಳಿಗ್ಗೆ ಕಾರ್ಖಾನೆಗೆ ಹೋಗಿದ್ದರು. ಕುಟುಂಬದ ಸದಸ್ಯರು ಮಂಗಳವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಹೊರಗೆ ಹೋಗಿದ್ದರು. 3 ಗಂಟೆ ವೇಳೆಗೆ ವಾಪಸ್ ಆಗಿದ್ದರು. ಆಗ ಮನೆಗೆ ಬಾಗಿಲು ತೆರೆದಿತ್ತು. ಒಳಗೆ ಹೋಗಿ ನೋಡಿದಾಗ ಚಿನ್ನಾಭರಣ ಹಾಗೂ ನಗದು ಕಳವಾಗಿರುವುದು ಗಮನಕ್ಕೆ ಬಂದಿತ್ತು’ ಎಂದು ಪೊಲೀಸರು ಹೇಳಿದ್ದಾರೆ.