<p><strong>ರಾಜರಾಜೇಶ್ವರಿನಗರ:</strong> ಮುತ್ತರಾಯ ನಗರ ರೈಲ್ವೆ ಗೇಟ್ನಿಂದ ಬೈರೇಶ್ವರ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಬದಿಯಲ್ಲಿರುವ ಮರಗಳ ಬುಡಕ್ಕೆ ಬೆಂಕಿ ಹಾಕಲಾಗುತ್ತಿದೆ.</p>.<p>ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯ ಮುತ್ತರಾಯನಗರದಿಂದ ಅರಣ್ಯ ನೌಕರ ಬಡಾವಣೆವರೆಗೆ ಬೆಳೆದಿರುವ ಮರದ ಬುಡಗಳಿಗೆ, ಪ್ಲಾಸ್ಟಿಕ್, ಕಸದ ರಾಶಿಯನ್ನು ತಂದು ಸುರಿದು ಪ್ರತಿನಿತ್ಯ ಬೆಂಕಿ ಹಚ್ಚುವುದರಿಂದ ನಿಧಾನವಾಗಿ ಬೆಂಕಿಯ ಕೆನ್ನಾಲಿಗೆಗೆ ಮರಗಳು ಆಹುತಿಯಾಗುತ್ತಿವೆ.</p>.<p>‘ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮರಗಳ ರಕ್ಷಣೆಗಾಗಿ ಅರಣ್ಯ ಇಲಾಖೆ ಹೆಸರಿಗಷ್ಟೇ ಇದೆ. ಮರಗಳ ರಕ್ಷಣೆ ಮಾಡುತ್ತಿಲ್ಲ. ನಿತ್ಯವೂ ಇಲ್ಲಿ ಮರಗಳು ನಾಶವಾಗುತ್ತಿವೆ. ಆದರೆ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಸ್ಥಳೀಯ ನಿವಾಸಿಗಳು ಬೇಸರ ವ್ಯಕ್ತಪಡಿಸಿದರು.</p>.<p>‘ಮರಗಳನ್ನು ನಾಶ ಮಾಡಲು ಬುಡಕ್ಕೆ ಆ್ಯಸಿಡ್ ಹಾಕುವುದು, ಬೆಂಕಿ ಹಚ್ಚುವುದು, ಮರಗಳನ್ನು ಕಡಿಯುವು<br>ದನ್ನು ಮಾಡುತ್ತಿದ್ದಾರೆ. ದೂರು ನೀಡಿದರೂ ನಗರ ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ನಿವಾಸಿಗಳಾದ ರಾಜೇಶ್ ಮತ್ತು ಅನಿಲ್ ದೂರಿದರು.</p>.<p>ವಲಯ ಅರಣ್ಯ ಅಧಿಕಾರಿ ಜಗದೀಶ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ, ಅವರು ಸ್ಪಂದಿಸಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಜರಾಜೇಶ್ವರಿನಗರ:</strong> ಮುತ್ತರಾಯ ನಗರ ರೈಲ್ವೆ ಗೇಟ್ನಿಂದ ಬೈರೇಶ್ವರ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಬದಿಯಲ್ಲಿರುವ ಮರಗಳ ಬುಡಕ್ಕೆ ಬೆಂಕಿ ಹಾಕಲಾಗುತ್ತಿದೆ.</p>.<p>ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯ ಮುತ್ತರಾಯನಗರದಿಂದ ಅರಣ್ಯ ನೌಕರ ಬಡಾವಣೆವರೆಗೆ ಬೆಳೆದಿರುವ ಮರದ ಬುಡಗಳಿಗೆ, ಪ್ಲಾಸ್ಟಿಕ್, ಕಸದ ರಾಶಿಯನ್ನು ತಂದು ಸುರಿದು ಪ್ರತಿನಿತ್ಯ ಬೆಂಕಿ ಹಚ್ಚುವುದರಿಂದ ನಿಧಾನವಾಗಿ ಬೆಂಕಿಯ ಕೆನ್ನಾಲಿಗೆಗೆ ಮರಗಳು ಆಹುತಿಯಾಗುತ್ತಿವೆ.</p>.<p>‘ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮರಗಳ ರಕ್ಷಣೆಗಾಗಿ ಅರಣ್ಯ ಇಲಾಖೆ ಹೆಸರಿಗಷ್ಟೇ ಇದೆ. ಮರಗಳ ರಕ್ಷಣೆ ಮಾಡುತ್ತಿಲ್ಲ. ನಿತ್ಯವೂ ಇಲ್ಲಿ ಮರಗಳು ನಾಶವಾಗುತ್ತಿವೆ. ಆದರೆ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಸ್ಥಳೀಯ ನಿವಾಸಿಗಳು ಬೇಸರ ವ್ಯಕ್ತಪಡಿಸಿದರು.</p>.<p>‘ಮರಗಳನ್ನು ನಾಶ ಮಾಡಲು ಬುಡಕ್ಕೆ ಆ್ಯಸಿಡ್ ಹಾಕುವುದು, ಬೆಂಕಿ ಹಚ್ಚುವುದು, ಮರಗಳನ್ನು ಕಡಿಯುವು<br>ದನ್ನು ಮಾಡುತ್ತಿದ್ದಾರೆ. ದೂರು ನೀಡಿದರೂ ನಗರ ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ನಿವಾಸಿಗಳಾದ ರಾಜೇಶ್ ಮತ್ತು ಅನಿಲ್ ದೂರಿದರು.</p>.<p>ವಲಯ ಅರಣ್ಯ ಅಧಿಕಾರಿ ಜಗದೀಶ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ, ಅವರು ಸ್ಪಂದಿಸಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>