‘ಸಹಕಾರ ಇಲಾಖೆಯ ಮೂಲ ಆಶಯಕ್ಕೆ ಮಾರಕವಾಗದಂತೆ ಅಧಿಕಾರಿಗಳು ಎಚ್ಚರವಹಿಸಿ ಕೆಲಸ ಮಾಡಬೇಕು. ಇಲಾಖೆಯೊಂದಿಗೆ ಹಳ್ಳಿಯ ಜನತೆ, ರೈತರು, ಕೆಳವರ್ಗದವರು ಹೆಚ್ಚಾಗಿ ವ್ಯವಹರಿಸುತ್ತಾರೆ. ಹಾಗಾಗಿ ಎಲ್ಲ ಹಂತದಲ್ಲೂ ಕನ್ನಡದಲ್ಲಿ ಮಾಹಿತಿ ನೀಡಬೇಕು. ಆದರೆ, ಸಹಕಾರ ಇಲಾಖೆಯ ವ್ಯಾಪ್ತಿಯಲ್ಲಿನ ಬಹುತೇಕ ಮಂಡಳಗಳ ಜಾಲತಾಣಗಳು ಈಗಲೂ ಅಂಗ್ಲಭಾಷೆಯಲ್ಲಿವೆ’ ಎಂದು ನಾಗಾಭರಣ ಬೇಸರ ವ್ಯಕ್ತಪಡಿಸಿದರು.