ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಗಡಿ ಗೋಪುರ ವೀಕ್ಷಿಸಲು ಮನವಿ

Last Updated 12 ಅಕ್ಟೋಬರ್ 2019, 20:14 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರತಿ 15 ದಿನಗಳಿಗೊಮ್ಮೆ ನಗರ ವೀಕ್ಷಣೆ ಮಾಡುತ್ತಿರುವುದು ಸ್ವಾಗತಾರ್ಹ. ಈ ವೇಳೆ ಅವರು ಕೆಂಪೇಗೌಡ ಪಶ್ಚಿಮ ಗಡಿ ಗೋಪುರ ವೀಕ್ಷಿಸಬೇಕು’ ಎಂದು ಉದಯಭಾನು ಕಲಾಸಂಘ ಮನವಿ ಮಾಡಿದೆ.

ಈ ಗಡಿಗೋಪುರ ಅಲ್ಲದೆ, ಗವಿಗಂಗಾಧರ ಸ್ವಾಮಿ ದೇಗುಲ, ಕೆಂಪಾಂಬುಧಿ ಕೆರೆ ಪರಿಸರ, ಜಿಂಕೆ ಉದ್ಯಾನವನ್ನು ವೀಕ್ಷಿಸಿ, ಅದರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಸಂಘ ಹೇಳಿದೆ.

ಪಶ್ಚಿಮ ಗಡಿ ಗೋಪುರ ಪ್ರದೇಶವನ್ನು ಪುರಾತತ್ವ ಐತಿಹಾಸಿಕ ಸಂರಕ್ಷಿತ ಪ್ರದೇಶ ಎಂದು ದಾಖಲಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದೂ ಸಂಘವು ಮುಖ್ಯಮಂತ್ರಿಯವರಲ್ಲಿ ವಿನಂತಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT