ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಳ್ಳಿಯಲ್ಲೇ ಉದ್ಯೋಗ ಸೃಷ್ಟಿಸಿದರೆ ಶರಾವತಿ ನೀರು ತರಬೇಕಿಲ್ಲ’

Last Updated 13 ಜುಲೈ 2019, 19:48 IST
ಅಕ್ಷರ ಗಾತ್ರ

ಬೆಂಗಳೂರು: ‘ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶ ಸೃಷ್ಟಿಯಾದರೆ, ಕೆಲಸಕ್ಕಾಗಿ ಬೆಂಗಳೂರಿಗೆ ಬರುವವರ ಸಂಖ್ಯೆ ಕಡಿಮೆಯಾಗುತ್ತದೆ. ಆಗ, ನಗರಕ್ಕೆ ಶರಾವತಿಯಿಂದ ನೀರು ತರಿಸುವ ಅಗತ್ಯವೇ ಬೀಳುವುದಿಲ್ಲ’ ಎಂದು ದೇಸಿ ಸಂಸ್ಥೆ ಸಂಸ್ಥಾಪಕ ಪ್ರಸನ್ನ ಹೇಳಿದರು.

ಬನಶಂಕರಿ ಮೊದಲನೇ ಹಂತದಲ್ಲಿ ಶನಿವಾರ ದೇಸಿ ಅಂಗಡಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಗ್ರಾಮೀಣ ಜನರಲ್ಲಿ ತಂತ್ರಜ್ಞಾನದ ಅರಿವು ಅಷ್ಟಿರುವುದಿಲ್ಲ ಆದರೆ, ಶ್ರಮ ಸಂಸ್ಕೃತಿ ಹೆಚ್ಚಿರುತ್ತದೆ. ನಗರದವರು ಬುದ್ಧಿವಂತರು. ಅವರಲ್ಲಿ ತಂತ್ರಜ್ಞಾನದ ಅರಿವು ಇರುತ್ತದೆ. ಬೆಂಗಳೂರಿನವರೂ ಹಳ್ಳಿಗಳತ್ತ ತೆರಳಬೇಕು. ಪರಸ್ಪರರು ಕಲಿತುಕೊಂಡು ಕೆಲಸ ಮಾಡುವಂತಾದರೆ ಸಮಗ್ರ ಅಭಿವೃದ್ಧಿ ಸಾಧ್ಯ’ ಎಂದರು.

ಸಂಸ್ಥೆಯ ಟ್ರಸ್ಟಿ ಸಿನಿಮಾ ನಿರ್ದೇಶಕ ಎಂ.ಎಸ್.ಸತ್ಯು, ‘ಚರಕ ಸಂಸ್ಥೆ 25 ವರ್ಷಗಳಿಂದ ಮತ್ತು ದೇಸಿ ಸಂಸ್ಥೆ 20 ವರ್ಷಗಳಿಂದ ಗ್ರಾಹಕರಿಗೆ ಗುಣಮಟ್ಟದ ಹತ್ತಿ ಉಡುಪುಗಳನ್ನು ಕಡಿಮೆ ದರದಲ್ಲಿ ಪೂರೈಸುತ್ತಿವೆ. ಕೈಮಗ್ಗ ಅಭಿವೃದ್ಧಿಗೆ ತಮ್ಮದೇ ಕೊಡುಗೆ ನೀಡುತ್ತಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT