‘ಪತ್ನಿ ಹಾಗೂ ಮಗ ಚೆನ್ನೈಯಲ್ಲಿ ನೆಲೆಸಿದ್ದರು.ನಂಜುಂಡನ್ ಅವರು ಒಬ್ಬರೇ ನಾಗದೇವನಹಳ್ಳಿಯ ಅಪಾರ್ಟ್ಮೆಂಟ್ ಸಮುಚ್ಚಯವೊಂದರ ಫ್ಲ್ಯಾಟ್ನಲ್ಲಿ ವಾಸವಿದ್ದರು. ಇತ್ತೀಚೆಗೆ ವಿಭಾಗದ ಮುಖ್ಯಸ್ಥರು ಕೆಲಸ ನಿಮಿತ್ತ ಹೊರ ರಾಜ್ಯಕ್ಕೆ ಹೋಗಿದ್ದರು. ಹೀಗಾಗಿ ನಂಜುಂಡನ್ ಅವರಿಗೆ ವಿಭಾಗದ ಉಸ್ತುವಾರಿ ನೀಡಲಾಗಿತ್ತು. ವಿಭಾಗದ ಕೆಲಸಗಳು ಬಾಕಿ ಇದ್ದಿದ್ದರಿಂದಲೇ ಅವರನ್ನು ಕರೆಯಲೆಂದು ಸಹಾಯಕ ಮನೆಗೆ ಹೋಗಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.